ರಾಜ್ಯ ಕಾಂಗ್ರೇಸ್ ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಮಿತ್ತಬಾಗಿಲು ಪಂಚಾಯತ್ ಮುಂದೆ ಪ್ರತಿಭಟನೆ

0

ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 2 ವರ್ಷಗಳಾದರೂ ಸುಸೂತ್ರವಾಗಿ ಆಡಳಿತ ನಡೆಸದೆ ಭೂಮಾಫಿಯ, ಪಟ್ಟಭದ್ರ ಹಿತಾಸಕ್ತಿಗಳಿಂದ ಜನರಿಗೆ ಸುಲಭ ರೀತಿಯ ಸೇವೆ ದೊರಕದೆ ಭಷ್ಟಚಾರದ ಕೂಪದಿಂದ ಸ್ರೀ ಸಾಮಾನ್ಯರ ಹಣ ದೋಚಲು ಅವೈಜ್ಞಾನಿಕ ನಿಯಮ ರೂಪಿಸಿ ಅಲೆದಾಟದ ಭಾಗ್ಯ ಒದಗಿಸಿರುವುದನ್ನು ಹಾಗೂ

9/11 ನಿವೇಶನಗಳ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ, ಅಕ್ರಮ ಸಕ್ರಮ ತಿರಸ್ಕರಿಸುವುದನ್ನು ಖಂಡಿಸಿ, ಬಡವರ ಅಶ್ರಯ ಮನೆಗಳ ಮಂಜೂರಾತಿ ಮತ್ತು ಅನುದಾನ ಬಿಡುಗಡೆಗೆ ಒತ್ತಾಯಿಸಿ, ವೃದ್ಯಾಪ ವೇತನ, ಸಂಧ್ಯಾ ಸುರಕ್ಷಾ ಹಣ ಬಿಡುಗಡೆಗೆ ಒತ್ತಾಯಿಸಿ, ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಿದ್ದನ್ನು ವಿರೋಧಿಸಿ, ವಿದ್ಯುತ್ ದರ ಏರಿಕೆಯನ್ನು ಖಂಡಿಸಿ, ಗೃಹ ನಿರ್ಮಾಣಕ್ಕೆ ಪೂರಕವಾದ ಮರಳು ಹಾಗೂ ಕೆಂಪುಕಲ್ಲು ಸಾಗಾಣಿಕೆ ನಿರ್ಬಂಧ ರದ್ದತಿಗೆ ಆಗ್ರಹಿಸಿ, ಭಾರತೀಯ ಜನತಾ ಪಾರ್ಟಿ ಮಿತ್ತಬಾಗಿಲು ಗ್ರಾ. ಪಂಚಾಯತ್ ಮುಂದೆ ಜೂ.23ರಂದು ಪ್ರತಿಭಟನೆ ನಡೆಸಿದರು. ಊರಿನ ಹಿರಿಯರು ಆಗಿರುವ ವಾಸುದೇವರಾವ್ ಕಕ್ಕೆನೇಜಿ ಹಾಗೂ ಮಿತ್ತಬಾಗಿಲು ಗ್ರಾ. ಪಂ. ಅಧ್ಯಕ್ಷ ವಿನಯ ಚಂದ್ರ, ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here