ಬೆಳ್ತಂಗಡಿ: ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಪಿಲಿಗೂಡು ಗೌರವಾಧ್ಯಕ್ಷ ಪದ್ಮನಾಭ ಶಿಲ್ಪಿ ಪಿಲಿಗೂಡು ಅವರ ಮುಂದಾಳತ್ವದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ನಡೆಸಲ್ಪಡುವ ಶ್ರೀ ಇಟಲ ಸೋಮನಾಥೇಶ್ವರ ಭಜನಾ ಮಂಡಳಿ ಪನಪಿಲ
ಇದರ ಸದಸ್ಯರಿಗೆ ಪುಸ್ತಕ ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ಭಜನಾ ಮಂಡಳಿಯ ಮಕ್ಕಳ ಪೋಷಕರಾದ ಭುವನೇಶ್, ಸುರೇಶ್, ದಿವ್ಯ ಹಾಗೂ ಸುನಂದ ಮತ್ತು ಭಜನಾ ತರಬೇತಿ ಗುರು ನಾಗೇಶ್ ಬಿ. ನೆರಿಯ
ಮತ್ತು ಮೂಡಬಿದ್ರೆ ಭಜನಾ ಪರಿಷತ್ತಿನ ಅಧ್ಯಕ್ಷ ಲಕ್ಷ್ಮಣ್ ಸುವರ್ಣ ಪನಪಿಲ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ರವಿ ಪೂಜಾರಿ, ಪಂಚಾಯಿತಿ ಸದಸ್ಯ ಮುನಿರಾಜ ಹೆಗಡೆ ನೆಲ್ಲಿಕಾರು, ವ್ಯವಸಾಯ ಸಂಘದ ನಿರ್ದೇಶಕ ಅಶ್ವಥ್ ಹಾಗೂ ವಿಶ್ವಹಿಂದು ಪರಿಷತ್ತಿನ ಸಂಚಾಲಕ ಭಜನಾ ಪರಿಷತ್ತಿನ ಸದಸ್ಯ ಹರೀಶ್ ಪೂಜಾರಿ ಮತ್ತು ಭಜನ ಪರಿಷತ್ತಿನ ಸಮನ್ವಯಾಧಿಕಾರಿ ಸಂತೋಷ್ ಆಳಿಯೂರು ಹಾಗೂ ವಿಠಲ ಸೋಮನಾಥೇಶ್ವರ ಭಜನ ಮಂಡಳಿಯ ಪೋಷಕರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಜನಾ ಮಂಡಳಿಯ ಸದಸ್ಯೆ ಅಂಕಿತ ಎಲ್ಲರನ್ನು ಸ್ವಾಗತಿಸಿದರು. ಸಂಜೀವಿ ಧನ್ಯವಾದ ನೀಡಿದರು.