ಬೆಳ್ತಂಗಡಿ: ಮಂಗಳೂರಿನ ಫರಂಗಿಪೇಟೆಯಲ್ಲಿ ಜೂ.21ರಂದು ಸಂಜೆ ಕಂಟೈನರ್ ಹಾಗೂ ದ್ವಿಚಕ್ರ ವಾಹನದ ನಡುವೆ ರಸ್ತೆ ಅಪಘಾತವಾಗಿದೆ. ದ್ವಿಚಕ್ರ ಸವಾರ ಮೃತ್ಯು.
ಡಿಕ್ಕಿ ಹೊಡೆದ ರಭಸಕ್ಕೆ ದ್ವಿಚಕ್ರ ವಾಹನ ಸವಾರ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕಳೆಂಜಿಬೈಲು ನಿವಾಸಿ ಆದಂ ಬ್ಯಾರಿಯವರ ಪುತ್ರ ಇಬ್ರಾಹಿಂ ಎನ್.(47ವ) ಮೃತಪಟ್ಟಿರುತ್ತಾರೆ. ಮೃತದೇಹ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿದೆ.