ಧರ್ಮಸ್ಥಳ: ಜೂ. 14ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ಸರಕಾರದ ಚುನಾವಣೆ ನಡೆಸಲಾಯಿತು. ಮುಖ್ಯ ಶಿಕ್ಷಕ ಶೀನಪ್ಪಗೌಡರ ಮಾರ್ಗದರ್ಶನದಲ್ಲಿ ಚುನಾವಣೆ ನಡೆಸಲಾಯಿತು.
ಚುನಾವಣೆಯ ಶಾಲಾ ನಾಯಕನ ಸ್ಥಾನಕ್ಕೆ ಒಟ್ಟು ನಾಲ್ಕು ಜನ ಸ್ಪರ್ಧಿಸಿದ್ದು ಉಪನಾಯಕನ ಸ್ಥಾನಕ್ಕೆ ನಾಲ್ಕು ಜನ ಸ್ಪರ್ಧಿಸಿದ್ದು ಅಂತಿಮವಾಗಿ ಶಾಲಾ ನಾಯಕಿಯಾಗಿ ಲಿಖಿತ ಎಸ್. ಪಿ.
ಉಪ ನಾಯಕನಾಗಿ ಸಮರ್ಥ ಆಯ್ಕೆಯಾದರು. ಮೊಬೈಲ್ ವಿವಿಪ್ಯಾಡಿನ ಮೂಲಕ ಈ ವರ್ಷದ ವಿದ್ಯಾರ್ಥಿ ಸರ್ಕಾರದ ಚುನಾವಣೆಯನ್ನು ನಡೆಸಲಾಯಿತು. ಶಾಲೆಯಲ್ಲಿ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದು ಸಹಕರಿಸಿದರು.