ಉಜಿರೆ: ಶ್ರೀ ಧ.ಮಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ‘ಅತಿಥಿ ಉಪನ್ಯಾಸ’ ಕಾರ್ಯಕ್ರಮ

0

ಉಜಿರೆ: ಶ್ರೀ.ಧ.ಮಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ‘ಅತಿಥಿ ಉಪನ್ಯಾಸ’ ಕಾರ್ಯಕ್ರಮ ನಡೆಯಿತು. ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಸ್ನಾತಕೋತರ ಅಧ್ಯಯನ ವಿಭಾಗಾಧ್ಯಕ್ಷ ಮಂಜುಶ್ರೀ ಆರ್. ಅವರು ಭಾಷೆ ಎಂಬುದು ಅಗೋಚರ ಶಕ್ತಿ. ವಿದ್ಯಾರ್ಥಿಗಳಿಗೆ ಅದನ್ನ ಹೇಗೆ ಬಳಸಬೇಕೆಂದು ಗೊತ್ತಿರಬೇಕು. ಆಂಗ್ಲ ಭಾಷೆ ಎನ್ನುವುದು ‘ಪಾಸ್ಪೋರ್ಟ್’ ಇದ್ದ ಹಾಗೆ ಈ ಭಾಷೆಯ ಅರಿವಿದ್ದರೆ ಯಾವ ದೇಶಕ್ಕೂ ನಾವು ಆರಾಮವಾಗಿ ಪ್ರಯಾಣವನ್ನು ಮಾಡಬಹುದು ಹಾಗೂ ಜನರ ಜೊತೆ ಸುಲಭವಾಗಿ ಬೇರೆಯಬಹುದು. ಭಾಷೆಯ ಮೂಲಕ ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ. ಸಂವಹನ ಎನ್ನುವುದು ದೇವರು ಮನುಷ್ಯರಿಗೆ ಕೊಟ್ಟ ‘ಸೂಪರ್ ಪವರ್’ ಅದನ್ನ ನಾವು ಸದುಪಯೋಗಪಡಿಸಿಕೊಳ್ಳಬೇಕು. ಬರವಣಿಗೆಯ ಶಕ್ತಿಯನ್ನು ಬೆಳೆಸಿಕೊಳ್ಳಿ. ಪ್ರತಿ ದಿನ ಹೊಸ ಹೊಸ ಶಬ್ದಗಳ ಪರಿಚಯ ಮಾಡಿಕೊಳ್ಳಿಯೆಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಹಾಗೂ ಆಂಗ್ಲ ವಿಭಾಗ ಮುಖ್ಯಸ್ಥೆ ಭವ್ಯಶ್ರೀ ಉಪಸ್ಥಿತರಿದ್ದರು. ಆಂಗ್ಲ ಭಾಷ ಉಪನ್ಯಾಸಕ ಪಾರ್ಶ್ವನಾಥ ಹೆಗ್ಡೆ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here