ಶಿಬಾಜೆ: ಜಯರಾಮ ನೆಲ್ಲಿತ್ತಾಯ ನಮ್ಮ ಸಮಾಜದ ಆಸ್ತಿ. ಕಳೆದ 41ವರ್ಷದಲ್ಲಿ ಶ್ರೀ ಧರ್ಮಸ್ಥಳ ಯೋಜನೆಯಲ್ಲಿ ಅವರ ನಿರಂತರ ಸೇವೆ ಅಭಿನಂದನೀಯ. ಇಡೀ ನಮ್ಮ ಸಮಾಜ ಅವರಿಗೆ ಅಭಿನಂದನೆ ತಿಳಿಸುತ್ತದೆ. ಅವರ ಯೋಜನೆ ಮತ್ತು ಯೋಚನೆ ಇನ್ನೂ ನಮ್ಮ ಸಮಾಜಕ್ಕೆ ದೊರಕುವಂತಾಗಲಿ. ದಣಿವರಿಯದ ಕಾಯಕ ಅವರಿದ್ದಾಗಿತ್ತು. ಮುಂದೆಯೂ ಅವರ ನಿರಂತರ ಸೇವೆಗೆ ನಮ್ಮೆಲ್ಲರಿದ್ದೂ ಸಹಕಾರ ಸಹಾಯವಿದೆ ಎಂದು ಬೆಳ್ತಂಗಡಿ ತಾಲೂಕು ಶಿವಳ್ಳಿ ಸಮಾಜದ ಅದ್ಯಕ್ಷ ರಾಜಾರಾಮ ಪೊಳ್ನಾಯ ತಿಳಿಸಿದರು.
ಅವರು ಬೆಳ್ತಂಗಡಿ ತಾಲೂಕು ಶಿಬಾಜೆ ಗ್ರಾಮದ ಪುರಂದರ ರಾವ್ ಅವರ ಮನೆಯಲ್ಲಿ ವಲಯ ಶಿವಳ್ಳಿ ಭಾಂದವರ ವತಿಯಿಂದ ಜಯರಾಮ ನೆಲ್ಲಿತ್ತಾಯ ಮತ್ತು ರೇಖಾ ಜಯರಾಮ ದಂಪತಿಗಳಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸಲ್ಲಿಸಿ ಮಾತನಾಡಿದರು.

ಶ್ರೀ ಧರ್ಮಸ್ಥಳ ಯೋಜನೆಯಲ್ಲಿ ನಿರಂತರ 41 ವರ್ಷದ ಸೇವೆಗಾಗಿ ಶಿಶಿಲ, ಶಿಭಾಜೆ, ಹತ್ಯಡ್ಕ, ರೆಖ್ಯಾ ಗ್ರಾಮದ ಸಮಾಜ ಭಾಂದವರಿಂದ ಜಯರಾಮ ನೆಲ್ಲಿತ್ತಾಯ ದಂಪತಿಗಳಿಗೆ ಅಭಿನಂದನಾ ಕಾರ್ಯಕ್ರಮ ಜರಗಿತ್ತು.
ಸಭೆಯ ಅದ್ಯಕ್ಷರಾಗಿ ವಲಯ ಅದ್ಯಕ್ಷ ಪುರಂದರ ರಾವ್ ವಹಿಸಿದ್ದರು. ತಾಲೂಕು ನಿಕಟ ಪೂರ್ವ ಅದ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಮತ್ತು ಕಾರ್ಯದರ್ಶಿ ಮುರಳಿ ಕೃಷ್ಣ ಆಚಾರ್ಯ ಅಭಿನಂದನಾ ಮಾತು ನುಡಿದರು. ಶ್ರೀಕರ ರಾವ್ ಅಭಿನಂದನಾ ಪತ್ರ ವಾಚಿಸಿದರು.

ವೇದಿಕೆಯಲ್ಲಿ ಭಾಸ್ಕರ ರಾವ್ ಮುಂಡುಪ್ಪಾಡಿ, ಶಿವಳ್ಳಿ ತಾಲೂಕು ಮಹಿಳಾ ಪಧಾಧಿಕಾರಿಗಳಾದ ಜಯಾ, ಅಕ್ಷತಾ, ನೆಲ್ಲಿತ್ತಾಯ ದಂಪತಿಗಳು, ಗಿರೀಶ ಕುದ್ರೆತ್ತಾಯ ಧರ್ಮಸ್ಥಳ, ನಿಡ್ಲೆ ಲಕ್ಮೀನಾರಾಯಣ, ಜಿಲ್ಲಾದ್ಯಕ್ಷ ಡಾ. ದಯಾಕರ ಮುಂತಾದವರು ಉಪಸ್ಥಿತರಿದ್ದರು.
ಶ್ರೀ ಭ್ರಾಮರಿ ಮಹಿಳಾ ಯಕ್ಷಗಾನ ವೃಂದ ಮಂಗಳೂರು ಅವರಿಂದ ಯಕ್ಷಗಾನ ತಾಳಮದ್ದಳೆ ಜರುಗಿತು.
ಸುಧೀರ ರಾವ್ ಅಡ್ಕಾಡಿ ಕಾರ್ಯಕ್ರಮದಲ್ಲಿ ಸ್ವಾಗತ ನೀಡಿದರು. ಪ್ರಾರ್ಥನೆಯನ್ನು ಆರಾದ್ಯ ಪಿ.ರಾವ್ ಮಾಡಿದರು. ಕಾರ್ಯದರ್ಶಿ ಮೋಹನ ಉಪಾದ್ಯಾಯ ನಿರೂಪಿಸಿದರು. ಗಿರೀಶ ಭಟ್ ವಂದಿಸಿದರು.