ಕಳೆoಜ: ಅಗ್ನಿವೀರನಿಗೆ ಸದಾಶಿವೇಶ್ವರ ದೇವಳದಿಂದ ಸನ್ಮಾನ

0

ಕಳೆoಜ: ಗ್ರಾಮದ ಪೆಲತ್ತಡಿ ಮನೆಯ ಸುಮಿತ್ರ ಮತ್ತು ವಿಶ್ವನಾಥ್ ದಂಪತಿಗಳ ಪುತ್ರ ಪುಷ್ಪರಾಜ್ ರವರು ಅಗ್ನಿವೀರ್ ತರಬೇತಿ ಮುಗಿಸಿ ಕಾರ್ಗಿಲ್ ನಲ್ಲಿ ಸೇವೆಗೆ ತೇರಳಲಿದ್ದು, ಆ ಪ್ರಯುಕ್ತ ಜೂ.14ರಂದು ಕಳೆoಜ ಶ್ರೀ ಸದಾಶಿವೇಶ್ವರ ದೇವಳದಲ್ಲಿ ಇಲ್ಲಿನ ಪ್ರಧಾನ ಅರ್ಚಕ ರಾಧಾ ಕೃಷ್ಣ ಭಟ್ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪರಾಜ್ ರವರಿಗೆ ಪ್ರಸಾದ ನೀಡಿದರು.

ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಶ್ರೀಧರ್ ರಾವ್ ಶಾಲು ಹೊದಿಸಿ ಗೌರವಿಸಿದರು. ದೇವಳದ ಆಡಳಿತ ಮಂಡಳಿ ಖಜಾಂಚಿ ಕೇಶವ ಗೌಡ ಬದಿ ಮಾರು, ಸದಸ್ಯರಾದ ನೀಲಯ್ಯ ಗೌಡ, ಕೇಶವ ಗೌಡ ಬರಮೇಲು, ಪುಷ್ಪರಾಜಾ ರವರ ಸ್ನೇಹಿತರಾದ ಹರ್ಷಿತ್, ಭವಿತ್, ವಿತೇಶ್, ಕಾಯರ್ತಡ್ಕ ಅಂಚೆ ಪಾಲಕಿ ಸ್ಮಿತಾ, ಜೆ.ಜೆ.ಸಿ ಅಧ್ಯಕ್ಷ ಶ್ರವಣ್ ಹಾಗೂ ಊರಿನ ಹಿರಿಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here