ಶಿಬಾಜೆ: ಜೂ.13ರಂದು ಮೊಂಟೆತ್ತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನದ ಒಳಾoಗಣ ಮತ್ತು ರಾಜಾಂಗಣದ ಮೇಲ್ಛಾವಣಿ ನಿರ್ಮಾಣ ಕೆಲಸಕ್ಕೆ ಶಿಲಾನ್ಯಾಸ ನೆರವೇರಲಿದೆ. ಬೆಳಿಗ್ಗೆ ಗಂಟೆ 7.30ಕ್ಕೆ ಗಣಹೋಮ ನಡೆಯಲಿದ್ದು, 9.30ರಿಂದ 10ಗಂಟೆಯ ಒಳಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ದೇವಳದ ಅಧ್ಯಕ್ಷ ಶ್ರೀಧರ್ ರಾವ್ ಅಜಿರಡ್ಕ ತಿಳಿಸಿದ್ದಾರೆ.
ಮುಖ್ಯ ಅತಿಥಿಗಳಾಗಿ ಸೌತಡ್ಕ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುಬ್ರಮಣ್ಯ ಶಬರಾಯ, ಗುಡ್ರಾದಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಮಂಜುನಾಥ ಗೌಡ ಕೖಕುರೆ, ಬೂಡುಮುಗೇರು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ರಾಜಗೋಪಾಲ ಭಟ್, ಅಮ್ಮಾಜೆ ದೇವಸ್ಥಾನದ ಆಡಳಿತ ಮೊಕ್ತೇಸರ ಸುಧಾಕರ ಗೌಡ ಬಾಗಿಲುಗದ್ದೆ, ಕಾಲಕಾಮ ಪರಶುರಾಮ ದೇವಸ್ಥಾನ ದರ್ಬೆತಡ್ಕ ಆಡಳಿತ ಮೊಕ್ತೇಸರ ಉದಯ ಕುಮಾರ್ ಅಭ್ಯಂಕರ್, ಅರಿಕೆಗುಡ್ಡೆ ವನದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಕಾಶ್ ಪಿಲಿಕ್ಕಬೆ, ಕಳೆಂಜ ಸದಾಶಿವ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಧರರಾವ್ ಕಾಯಡ, ವಾಮನ ತಾಮ್ಹಣ್ಕರ್ ಅರಸಿನಮಕ್ಕಿ, ಸಿ.ಎ ಬ್ಯಾಂಕ್ ಅಧ್ಯಕ್ಷ ರಾಘವೇಂದ್ರ ನಾಯಕ್, ನಿರ್ದೇಶಕ ಧರ್ಮರಾಜ ಅಡ್ಕಾರಿ ಭಾಗವಹಿಸಲಿದ್ದಾರೆ.