ಶಿಬಾಜೆ: ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷೆ ರತ್ನ ಗಿಡ ನೆಡುವ ಮೂಲಕ ಉದ್ಘಾಟನೆ ಮಾಡಿದರು.


ಮುಖ್ಯ ಅತಿಥಿಯಾಗಿ ಕೊಕ್ಕಡ ವಿಭಾಗದ ಉಪವಲಯ ಅರಣ್ಯಧಿಕಾರಿ ಶಿವಾನಂದ ಆಚಾರ್ಯ, ಶಿಬಾಜೆ ಉಪ ವಲಯ ಅರಣ್ಯಧಿಕಾರಿ ರಾಜೇಶ್, ಗಸ್ತು ಅರಣ್ಯಪಾಲಕ ಸುನಿಲ್ ನಾಯ್ಕ್, ಶಾಲೆಯ ಮುಖ್ಯ ಗುರು ಭೀಮ ನಾಯ್ಕ್, ಎಸ್. ಡಿ. ಎಂ. ಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ, ಅಂಗನವಾಡಿ ಶಿಕ್ಷಕಿಯರು, ಅರಣ್ಯ ಸಿಬ್ಬಂದಿಗಳು, ಪೋಷಕರು ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.