ಉಜಿರೆ: ಅಲ್ಪಕಾಲದ ಅಸೌಖ್ಯದಿಂದಾಗಿ ಉಜಿರೆಯ ರಾಮಚಂದ್ರ ಕಾಮತ್ ನಿಧನರಾಗಿದ್ದಾರೆ. ಇವರು ಉಜಿರೆಯ ಗಣೇಶ್ ಫ್ಲೋರ್ ಮಿಲ್ ನ ಮಾಲಕರ ಸಹೋದರನಾಗಿದ್ದಾರೆ.
ಅಸೌಖ್ಯದಿಂದಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದ ರಾಮಚಂದ್ರ ಕಾಮತ್ ಜೂ. 9ರಂದು ಕೊನೆಯುಸಿರೆಳೆದರು. ಇವರು ಪತ್ನಿ ಊರ್ಮಿಳಾ ಕಾಮತ್, ಮಗ ಮಾಧವ ಕಾಮತ್, ಸಹೋದರರಾದ ಕೆ. ಮಂಜುನಾಥ್ ಕಾಮತ್ ಉಜಿರೆ, ದಾಮೋದರ ಕಾಮತ್ ಉಜಿರೆ, ನಾಗರಾಜ್ ಕಾಮತ್ ಉಜಿರೆ, ಸಹೋದರಿಯರಾದ ದೀಪ ಹೇಮಂತ್ ರಾವ್ ಎರಡೂರ್ ಗುರುವಾಯನಕೆರೆ, ಅನಿತಾ ಶಿವಾನಂದ್ ಬಾಳಿಗ ಬೆಳಗಾಂ, ಲಕ್ಷ್ಮಿ ಶ್ರೀಧರ್ ಭಟ್ ಉಡುಪಿ ಇವರನ್ನು ಅಗಲಿದ್ದಾರೆ.