ಚಾರ್ಮಾಡಿ: ಗ್ರಾಮದ ಬೀಟಿಗೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೋಲೆರೋ ವಾಹನವು ಚರಂಡಿಗೆ ಬಿದ್ದ ಘಟನೆ ಜೂ.8ರಂದು ರಾತ್ರಿ ನಡೆದಿದೆ.
ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ನಿವಾಸಿಗಳಾದ ಚೇತನ್ ಹಾಗೂ ಸುರೇಶ್ ಇಬ್ಬರು ಕಾರ್ಕಳದಿಂದ ವಾಪಸ್ ಚಾರ್ಮಾಡಿಗೆ ಬರುತ್ತಿರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬೀಟಿಗೆ ಎಂಬಲ್ಲಿ ನಾಯಿ ಅಡ್ಡ ಬಂದಿದ್ದು, ಅದನ್ನು ತಪ್ಪಿಸುವ ವೇಳೆ ಈ ಘಟನೆ ಸಂಭವಿಸಿದೆ. ವಾಹನದಲ್ಲಿ ಇದ್ದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಸಾರ್ವಜನಿಕರು ಸೇರಿ ವಾಹನವನ್ನು ಹೊರ ತೆಗೆದಿದ್ದಾರೆ.