ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಗಿಡ ನೆಟ್ಟು ವನಮಹೋತ್ಸವ ಆಚರಣೆ

0

ಬೆಳ್ತಂಗಡಿ: ಗೇರುಕಟ್ಟೆ ಸಯ್ಯದ್ ಉಮರ್ ಅಸ್ಸಖಾಫ್ ಮನ್ ಷರ್ ತಂಗಳರವರ ನೇತೃತ್ವದ ಮನ್ ಶ್ಯರ್ ವಿವಿಧ ವಿದ್ಯಾ ಸಂಸ್ಥೆಗಳ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳು ಹಾಗು ಕರ್ನಾಟಕ ಅರಣ್ಯ ಇಲಾಖೆ ವನ್ಯಜೀವಿ ವಲಯ ಬೆಳ್ತಂಗಡಿ ಇದರ ಸಹಯೋಗದಲ್ಲಿ ಇಂದಬೆಟ್ಟು ಗಸ್ತು ವ್ಯಾಪ್ತಿಯ ಕುದುರೆಮುಖ ರಕ್ಷಿತಾ ಅರಣ್ಯದಲ್ಲಿ ಸುಮಾರು 200ಕ್ಕಿಂತ ಅಧಿಕ ಉಪಯುಕ್ತ ಗಿಡಗಳನ್ನು ನೆಡುವುದರ ಮೂಲಕ ಬಹಳ ವಿಜೃಂಭಣೆಯಿಂದ ಜೂ.5ರಂದು ವಿಶ್ವ ಪರಿಸರ ದಿನ ಆಚರಿಸಲಾಯಿತು.

ಕಾಡು ಬೆಳೆಸುವುದರ ಮಹತ್ವ, ಔಷಧಿ ಸಸ್ಯಗಳ ಮಹತ್ವ, ಅದರ ಗುರುತು ಪತ್ತೆ ಹಚ್ಚುವಿಕೆ ಹಾಗೂ ವೈಜ್ಞಾನಿಕವಾಗಿ ಗಿಡ ನೆಡುವುದರ ಬಗ್ಗೆ ಸವಿಸ್ತಾರವಾಗಿ ಅರಣ್ಯ ಇಲಾಖೆಯ ಬೀಟ್ ಫಾರೆಸ್ಟ್ ಅಧಿಕಾರಿ ಭರತೇಶ್ ಸುವರ್ಣ ಅರಣ್ಯ ವೀಕ್ಷಕರಾದ ಸತೀಶ್ ಸ್ವಾದಿಕ್, ಪ್ರವೀಣ್ ಗೋಪಾಲ್ ರವರು ಮಾಹಿತಿಯನ್ನು ನೀಡಿದರು. ಮನ್ ಶ್ಯರ್ ಸಂಸ್ಥೆಯ ಜನರಲ್ ಮ್ಯಾನೇಜರ್ ಹೈದರ್ ಮರ್ದಾಲ ಸಾಂಕೇತಿಕವಾಗಿ ಗಿಡ ನೆಡುವುದರ ಮೂಲಕ ಶಿಬಿರಕ್ಕೆ ಚಾಲನೆಯನ್ನು ನೀಡಿದರು.

ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ರಶೀದ್ ಕುಪ್ಪೆಟ್ಟಿ, ಪ್ಯಾರಾಮೆಡಿಕಲ್ ಕಾಲೇಜು ಉಪನ್ಯಾಸಕಿ ಪವಿತ್ರ ಹೆಚ್. ಪಿ.ಯು.ಕಾಲೇಜು ಉಪನ್ಯಾಸಕಿ ಸುಪ್ರಿಯಾ ಜಾದವ್, ಪ್ಯಾರಾಮೆಡಿಕಲ್ ಪಿ.ಯು ಕಾಲೇಜು, ಸ್ಕೂಲ್ ನ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಮನ್ ಶ್ಯರ್ ಎನ್.ಎಸ್.ಎಸ್ ಘಟಕದ ನಿರ್ವಹಣಾಧಿಕಾರಿ ಮೊಹಮ್ಮದ್ ತೌಫಿಕ್ ಪಟ್ಟೆ ಯಶಸ್ವಿಯಾಗಿ ಆಯೋಜನೆಯನ್ನು ಮಾಡಿದರು.

LEAVE A REPLY

Please enter your comment!
Please enter your name here