ಉಜಿರೆ ಮುಂಡತೋಡಿ ಸ. ಹಿ. ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

0

ಉಜಿರೆ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಡತ್ತೋಡಿಯಲ್ಲಿ ಅರಣ್ಯ ಇಲಾಖೆ ಮತ್ತು ಶಾಲಾ ಎಸ್. ಡಿ. ಎಂ. ಸಿ. ಯ ಸಹಕಾರದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಜೂ. 5ರಂದು ಆಚರಿಸಲಾಯಿತು. ಬೆಳ್ತಂಗಡಿ ವಲಯದ ಉಪ ವಲಯಾರಣ್ಯಾಧಿಕಾರಿ ಕಮಲ, ದಸ್ತು ಅರಣ್ಯ ಪಾಲಕ ಸಂತೋಷ್ ಕೆ., ಸದಾನಂದ ಗೌಡ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಗಿಡವನ್ನ ವಿತರಿಸಿ ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿದರು.

ಏಕ್ ಪೇಡ್ ಮಾ ಕೆ ನಾಮ್ ಎಂಬ ಶೀರ್ಷಿಕೆಯಡಿ ತಾಯಂದಿರು ಗಿಡ ನೆಟ್ಟು ಸಹಕರಿಸಿದರು. ಎಸ್. ಡಿ. ಎಂ. ಸಿ ಅಧ್ಯಕ್ಷೆ ರೇವತಿ, ಸದಸ್ಯರಾದ ವೆಂಕಪ್ಪ, ಅಶೋಕ್, ಎಲ್ಲಾ ಸದಸ್ಯರೂ ಮತ್ತು ಗ್ರಾಮ ಪಂಚಾಯತ್ ಉಜಿರೆಯ ಗ್ರಂಥ ಪಾಲಕಿ ತಾರಾ ಶ್ರೀನಿವಾಸ್ ಹಾಜರಿದ್ದರು. ಮುಖ್ಯ ಶಿಕ್ಷಕಿ ಸೇವಂತಿ ಸ್ವಾಗತಿಸಿದರು. ಶಿಕ್ಷಕಿ ಪ್ರೀತಿ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಉಷಾಲತ ವಂದಿಸಿದರು.

LEAVE A REPLY

Please enter your comment!
Please enter your name here