ಉಜಿರೆ: ಸಂತ ಅಂತೋನಿ ಚರ್ಚ್ ನ ನಿತ್ಯಾಧರ್ ವಾಳೆಯ ವಲೇರಿಯನ್ ಡಿ’ಸೋಜಾ ರವರ ಪುತ್ರ ವಿಶಾಲ್ ಡಿ’ಸೋಜಾ ಹೆಸರಿನಲ್ಲಿ ಪ್ರಾರಂಭಿಸಿದ ವಿಶಾಲ್ ಸೇವಾ ಟ್ರಸ್ಟ್ ನಿಂದ ಬಡ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆಯನ್ನು ಜೂ.1ರಂದು ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ಜರಗಿತು. ಚರ್ಚ್ ಧರ್ಮಗುರು ಫಾ.ಅಬೆಲ್ ಲೋಬೊ ಬಡ ಮಕ್ಕಳಿಗೆ ಪುಸ್ತಕ ವಿತರಿಸಿದರು.
ಟ್ರಸ್ಟಿನ ಸಂಚಾಲಕ ವಲೇರಿಯನ್ ಡಿಸೋಜಾ, ಫ್ಲೋರಿನ್ ಡಿಸೋಜಾ, ವಿಶಾಲ್ ಡಿಸೋಜಾ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಧರ್ಮಭಗಿಣಿ ಸಿ. ನ್ಯಾನ್ಸಿ ಡಾಯಸ್, ಮಕ್ಕಳು ಉಪಸ್ಥಿತರಿದ್ದರು.