ಕಡಿರುದ್ಯಾವರ ಗ್ರಾಮದ ಶೆಟ್ಟಿಪಾಲು ಎಂಬಲ್ಲಿ ಜೂ.1ರಂದು ಕಾಡಾನೆ ದಾಳಿ ನಡೆಸಿದೆ.
ಸುಮಾರು ಮಧ್ಯರಾತ್ರಿ 1 ಗಂಟೆಯ ವೇಳೆ ಚಿನ್ನಮ್ಮ ಹಾಗೂ ಪುರಂದರ ಮೊಯ್ಲಿ, ಶಯೀಜ್ ರವರ ಬಾಳೆ ಗಿಡ, ಅಡಿಕೆ ಗಿಡ, ತೆಂಗಿನ ಮರ ನಾಶವಾಗಿದ್ದು ಕೃಷಿ ಹಾನಿ ಮಾಡಿದೆ.ಕಳೆದ ಕೆಲದಿನಗಳಿಂದಲೂ ಈ ಪ್ರದೇಶದಲ್ಲಿ ಕಾಡಾನೆಗಳು ತಿರುಗಾಟ ನಡೆಸುತ್ತಿದ್ದು ಆಗಾಗ ತೋಟಗಳಿಗೆ ನುಗ್ಗುತ್ತಿದೆ.
ಕಾಡಾನೆಗಳ ಅಟ್ಟಹಾಸ ಮಿತಿ ಮೀರುತ್ತಿದ್ದು ಅದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸುತ್ತಿದ್ದಾರೆ.