ಉಜಿರೆಯಲ್ಲಿ ಡಿ.ಡಿ. ಮೆನ್ಸ್ & ವಿಮೆನ್ಸ್ ಸೆಂಟರ್ ಮಲ್ಟಿ‌ ಶೋರೂಮ್ ಅದ್ದೂರಿ ಉದ್ಘಾಟನೆ

0

ಬೆಳ್ತಂಗಡಿ: ಉಜಿರೆಯ ಬೆಳಾಲ್ ಕ್ರಾಸ್ ಬಳಿಯ ಸಮೃದ್ದಿ ಕಟ್ಟಡದಲ್ಲಿ ಮೇ.31ರಂದು ಡಿ.ಡಿ ಮೆನ್ಸ್ & ವಿಮೆನ್ಸ್ ಸೆಂಟರ್ ನ ಮಲ್ಟಿ ಶೋರೂಮ್ ಶುಭಾರಂಭಗೊಂಡಿದ್ದು, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯರು ಉದ್ಘಾಟಸಿದರು.

ಮಹಿಳಾ ಉದ್ಯಮ ಕ್ಷೇತ್ರದಲ್ಲಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಸಂಧ್ಯಾ ಫ್ರೆಶ್ ಉಜಿರೆ ಇದರ ಸಿಇಒ ಅರ್ಚನಾ ರಾಜೇಶ್ ಪೈ ಅವರಿಗೆ ಡಿ.ಡಿ. ಸಂಸ್ಥೆ “ಉದ್ಯೋಗ ರತ್ನ” ಪ್ರಶಸ್ತಿ ನೀಡಿ ಗೌರವಿಸಿತು.

ವಸ್ತ್ರ ವ್ಯಾಪಾರ ಕ್ಷೇತ್ರದಲ್ಲಿ ಸುದೀರ್ಘ ವರ್ಷಗಳ ಅನುಭವ ಹೊಂದಿ, ಈಗಾಗಲೇ ಹಲವು ಶಾಖೆಗಳನ್ನು ತೆರೆದು ವಿಸ್ತಾರವಾಗಿ ಬೆಳೆದಿರುವ ಅತ್ಯಂತ ಜನಪ್ರಿಯ ಮಳಿಗೆ ಧೂಮ್ ಧಮಾಕಾ ಡಿ.ಡಿ. ಗ್ರೂಪ್ಸ್ ನ ನೂತನ ಮಲ್ಟಿ ಶೋ ರೂಂನಲ್ಲಿ, ವಿಶಾಲವಾದ ಶೋರೂಮ್, ಒಂದೇ ಸೂರಿನಡಿ ಪುರುಷ- ಮಹಿಳೆಯರ, ಮಕ್ಕಳ ವಸ್ರ್ತಗಳ ಪ್ರತ್ಯೇಕ ಕೌಂಟರ್, ಪ್ರಖ್ಯಾತ ಕಂಪೆನಿಗಳ ವಸ್ರ್ತಗಳ ಅಪೂರ್ವ ಸಂಗ್ರಹ, ಜನಸಾಮಾನ್ಯರ ಆಯ್ಕೆಯ ವಸ್ರ್ತಗಳೂ ಯತೇಚ್ಚ ಲಭ್ಯತೆ, ಮೋಲ್ ಮಾದರಿಯಲ್ಲಿ ಗ್ರಾಹಕರಿಗೆ ಬೇಕಾದ್ದನ್ನು ಆರಿಸುವ ಮುಕ್ತ ಅವಕಾಶ, ಗ್ರಾಹಕರಿಗೆ ವಾಶ್ ರೂಂ ಮತ್ತು ಲೇಡಿಸ್ ಕಾರ್ನರ್ ಎಲ್ಲಾ ಸೌಕರ್ಯಗಳನ್ನೂ ಒಳಗೊಂಡು ಮಾದರಿಯಾಗಿದೆ. ಒನ್ ಗ್ರಾಂ ಗೋಲ್ಡ್ ಮತ್ತು ಆಂಟಿಕ್ ಮಾದರಿಯ ಆಭರಣಗಳು, ಮಹಿಳೆಯರ‌ ಸ್ಡೈಲಿಶ್ ಬ್ಯಾಗ್‌ಗಳು, ಚಪ್ಪಲ್ ಮತ್ತು ಶೂಸ್ ಗಳನ್ನೂ ಒಂದೇ ಕಡೆ ಆಯ್ಕೆ ಮಾಡುವ ಅವಕಾಶ ಗ್ರಾಹಕರಿಗೆ ಲಭ್ಯವಿದೆ.

ಸುಪ್ರಿಂ ಸೆಂಟರ್ ಉಜಿರೆ ಮಾಲಕ ಅಬೂಬಕ್ಕರ್, ಆಲ್ ಇಂಡಿಯಾ ಕ್ಯಾಥೊಲಿಕ್ ಯೂನಿಯನ್ ನಿಕಟಪೂರ್ವ ರಾಜ್ಯಾಧ್ಯಕ್ಷ ಸೇವಿಯರ್ ಪಾಲೇಲಿ, ಉಪ್ಪಿನಂಗಡಿಯ ಹಿರಿಯ ಉದ್ಯಮಿ ಸಚಿನ್ ಸುಂದರ ಗೌಡ ಪಡಂಗಡಿ‌ ಗ್ರಾ.ಪಂ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್, ಉಜಿರೆ ಗ್ರಾ.ಪಂ ಅಧ್ಯಕ್ಷೆ ಉಷಾಕಿರಣ ಕಾರಂತ, ಉಪಾಧ್ಯಕ್ಷ ರವಿ ಕುಮಾರ್ ಬರಮೇಲು, ಮಾಜಿ ಅಧ್ಯಕ್ಷ ಯು.ಎ ಹಮೀದ್, ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ, ಮಾಚಾರು ಮಸ್ಜಿದ್ ಅಧ್ಯಕ್ಷ ಬಿ.ಎಂ ಇಲ್ಯಾಸ್, ಗುರುವಾಯನಕೆರೆ ಮಸ್ಜಿದ್ ಅಧ್ಯಕ್ಷ ಹಾಜಿ‌ ಅಬ್ದುಲ್ ಲತೀಫ್, ಶ್ಯಾಂ ಸುಂದರ್ ಉಜಿರೆ, ಎ.ಎಮ್ ಕನ್ಟ್ರಕ್ಷನ್ ಚಿಕ್ಕಮಗಳೂರು ಮಾಲಕ ರಫೀಕ್, ಮಹಿಳಾ ಮಂಡಲಗಳ ಒಕ್ಕೂಟದ ಗೌರವಾಧ್ಯಕ್ಷೆ ಶಾಂತಾ ಬಂಗೇರ, ವಂದನಾ ಲ್ಯಾಬೊರೇಟರಿ ಮಾಲಕಿ ಸವಿತಾ ರಮೇಶ್, ಹಳ್ಳಿಮ‌ನೆ ಪ್ರವೀಣ್, ಉಜಿರೆ ಸಹಕಾರಿ ಸಂಘದ ಅಧ್ಯಕ್ಷ ಕೇರಿಮಾರ್‌ ಬಾಲಕೃಷ್ಣ ಗೌಡ, ಇವರು ಭಾಗವಹಿಸಿದ್ದರು.

ಹಿರಿಯ ಪತ್ರಕರ್ತ ಅಚ್ಚು ಮುಂಡಾಜೆ ಕಾರ್ಯಕ್ರಮ ಸಂಯೋಜಿಸಿದರು. ಡಿ.ಡಿ ಸಂಸ್ಥೆಯ ಮಾಲಿಕ ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ಅವರ ಪತ್ನಿ ಅಲಿಮಮ್ಮ, ಮಕ್ಕಳಾದ ಇರ್ಫಾನ್, ಇಮ್ರಾನ್, ಸಿನಾನ್ ಮತ್ತು ಶಿಮ್ರಾನ್ ಹಾಗೂ ಮನೆಯವರು ಎಲ್ಲಾ ಆಹ್ವಾನಿತರನ್ನು ಬರಮಾಡಿಕೊಂಡು ಗೌರವಿಸಿದರು.

ಸಯ್ಯಿದ್ ಕಾಜೂರು ತಂಙಳ್ ದುಆ ಆಶೀರ್ವಚನಗೈದರು. ಸಯ್ಯಿದ್ ತ್ವಾಹಾ ಜಿಫ್ರಿ ತಂಙಳ್ ದಾರುಸ್ಸಲಾಂ ಬೆಳ್ತಂಗಡಿ ಶುಭಾಶೀರ್ವಾದಗೈದರು. ಬೆಳ್ತಂಗಡಿ ಮಸ್ಜಿದ್, ಹಳೆಪೇಟೆ ಮತ್ತು ಟೌನ್ ಮಸ್ಜಿದ್ ಧರ್ಮಗುರುಗಳು ಭಾಗಿಯಾಗಿದ್ದರು. ಉಪ್ಪಿನಂಗಡಿಯ ಪ್ರಥಮ ಮಳಿಗೆಯಿಂದ ತನ್ನ ಚೈತ್ರ ಯಾತ್ರೆ ಆರಂಭಿಸಿರುವ ಡಿ.ಡಿ (ಧೂಮ್ ಧಮಾಕಾ) ಇಂದು ಉಪ್ಪಿನಂಗಡಿ, ಬೆಳ್ತಂಗಡಿ, ಮಡಂತ್ಯಾರು, ಗುರುವಾಯನಕೆರೆ, ಮೂಡಿಗೆರೆ,‌ ಚಿಕ್ಕಮಗಳೂರು ಇಲ್ಲೆಲ್ಲಾ ಶಾಖೆಗಳನ್ನು ಹೊಂದಿದ್ದು ಗ್ರಾಹಕ ಸ್ನೇಹಿಯಾಗಿ, ವಿಶ್ವಾಸಾರ್ಹತೆ ಮೂಲಕ ಬೆಳೆದು ನಿಂತಿದೆ.

LEAVE A REPLY

Please enter your comment!
Please enter your name here