ಪದ್ಮುಂಜ: ಇಲ್ಲಿಯ ಹಾಲು ಉತ್ಪಾದಕರ ಸಹಕಾರಿ ಸಂಘದ ವಿಸ್ತ್ರತ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ರವರ ಅಧ್ಯಕ್ಷತೆಯಲ್ಲಿ ಮೇ. 31ರಂದು ಪದ್ಮುಂಜ ಸಿ ಎ ಬ್ಯಾಂಕ್ ವಠಾರದಲ್ಲಿ ನೆರವೇರಿತು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು 40 ವರ್ಷಗಳ ಹಿಂದೆ ಸಂಘದ ಸ್ಥಾಪಕಾಧ್ಯಕ್ಷ ರಾಮಣ್ಣ ಮೇಲಾಂಟರವರಿಂದ ಈ ತನಕ ಅಧ್ಯಕ್ಷರಾಗಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರ ಸಹಕಾರದಿಂದ ಕಾರ್ಯದರ್ಶಿ ಜಯರಾಮ ಶೆಟ್ಟಿಯವರ ಪ್ರಾಮಾಣಿಕ ಸೇವೆಯಿಂದ ಪದ್ಮುಂಜ ಹಾಲು ಉತ್ಪಾದಕರ ಸಂಘವು ಇಷ್ಟೊಂದು ಅಭಿವೃದ್ಧಿ ಹೊಂದಿ ಜಿಲ್ಲೆಯಲ್ಲಿ ಮಾದರಿ ಸಂಘವಾಗಿ ಬೆಳೆದಿದೆ ಎಂದರು.

ಹಾಗೆಯೇ ಜಿಲ್ಲೆಗೆ ಅತೀ ಹೆಚ್ಚು ಹಾಲು ಸಂಗ್ರಹಣೆ ಮಾಡುವ ತಾಲೂಕು ಬೆಳ್ತಂಗಡಿ ಆದುದರಿಂದ ಬೆಳ್ತಂಗಡಿಯಲ್ಲೊಂದು ಕ್ಯಾಂಪ್ಕೋ ಕಛೇರಿ ತೆರೆಯಬೇಕು ಎಂದು ಜಿಲ್ಲಾಧ್ಯಕ್ಷರಲ್ಲಿ ಮನವಿ ಮಾಡಿದರು. ಪದ್ಮುಂಜ ಹಾಲು ಸೊಸೈಟಿಯ ರಸ್ತೆ ಕಾಮಗಾರಿಗೆ ಎರಡು ಲಕ್ಷ ರೂಪಾಯಿ ಮಂಜೂರು ಮಾಡುತ್ತೇನೆಂದು ಭರವಸೆ ನೀಡಿದರು.
ನೂತನ ವಿಸ್ತ್ರತ ಕಟ್ಟಡ ಉದ್ಘಾಟನೆ ಮಾಡಿದ ಜಿಲ್ಲಾಧ್ಯಕ್ಷ ರವಿರಾಜ್ ಹೆಗ್ಡೆಯವರು ಮಾತನಾಡಿ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ ದಿನವೊಂದಕ್ಕೆ ಮೂರು ಸಾವಿರಕ್ಕಿಂತ ಹೆಚ್ಚು ಹಾಲು ಸಂಗ್ರಹಣೆ ಮಾಡುವ ಸಂಘ ಅದು ಪದ್ಮುಂಜ ಮತ್ತು ತಣ್ಣೀರುಪಂತ ಸಂಘವಾಗಿದೆ.
ಅತೀ ಹೆಚ್ಚು ಹಾಲು ಸಂಗ್ರಹಣೆ ಮಾಡುವ ತಾಲೂಕು ಅಂದರೆ ಅದು ಬೆಳ್ತಂಗಡಿ ತಾಲೂಕಾಗಿದೆ. ಶಾಸಕರು ಹೇಳಿದ ಹಾಗೆ ಬೆಳ್ತಂಗಡಿಗೊಂದು ಕ್ಯಾಂಪ್ಕೋ ಕಛೇರಿ ತೆರೆಯಬೇಕೆಂಬುದು ಹಲವಾರು ವರ್ಷದ ಬೇಡಿಕೆ ತಾಲೂಕಿನ ಬೇಡಿಕೆಯನ್ನು ಆದಷ್ಟು ಬೇಗ ಈಡೇರಿಸಲು ಪ್ರಯತ್ನಿಸಲಾಗುವುದು ಎಂದರು.

ನಿವೃತ್ತಿಗೊಳ್ಳುತ್ತಿರುವ ಸಂಘದ ಕಾರ್ಯದರ್ಶಿ ಜಯರಾಮ ಶೆಟ್ಟಿ ಅಪರೂಪದಲ್ಲಿ ಅಪರೂಪದ ಓರ್ವ ಪ್ರಮಾಣಿಕ ಸೇವಕ, ತನ್ನ ನಿದ್ದೆಯನ್ನು ಲೆಕ್ಕಿಸದೆ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ.
ಇಂದು ಸಂಘವು ಒಂದೂವರೆ ಕೋಟಿಗಿಂತ ಹೆಚ್ಚು ಸ್ಥಿರಾಸ್ತಿ ಹೊಂದಲು ಜಯರಾಮ ಶೆಟ್ಟಿ ಹಾಗೂ ಸಿಬ್ಬಂದಿಗಳ ಶಿಸ್ತು ಬದ್ಧ ಸೇವೆಯೆ ಕಾರಣ ಎಂದು ಹೇಳಿದರು.
ನಂದಿನಿ ಸಭಾ ಭವನವನ್ನು ಸಂಸದರ ಅನುಪಸ್ಥಿತಿಯಲ್ಲಿ ಶಾಸಕ ಹರೀಶ್ ಪೂಂಜರವರು ಉದ್ಘಾಟಿಸಿದರು.
ಗೋದಾಮು ಕಟ್ಟಡವನ್ನು ಜಿಲ್ಲಾ ಉಪಾಧ್ಯಕ್ಷ ಉದಯ ಕೋಟ್ಯಾನ್ ಉದ್ಘಾಟಿಸಿದರು. ಜಿಲ್ಲಾ ನಿಕಟಪೂರ್ವ ಉಪಾಧ್ಯಕ್ಷ ಜಯರಾಮ ರೈ ಬಲಜ್ಜ ಕಛೇರಿ ಕೊಠಡಿ ಉದ್ಘಾಟಿಸಿದರು.
ನಲುವತ್ತು ವರ್ಷದಿಂದ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ ಜಯರಾಮ ಶೆಟ್ಟಿಯವರನ್ನು ಹೂ ಹಾರ ಚಿಣ್ಮದುಂಗುರ ನೀಡಿ ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು. ಜೊತೆಗೆ ಪತ್ನಿ ಶಶಿಕಲಾ ಹಾಗೂ ಪುತ್ರಿ ರಶ್ಮಿತಾ ಉಪಸ್ಥಿತರಿದ್ದರು.
ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರಿಗೆ ಸನ್ಮಾನ ಈ ಹಿಂದಿನ ಅವಧಿಯಲ್ಲಿ ಸೇವೆ ಸಲ್ಲಿಸಿದ ಸ್ಥಾಪಕಾಧ್ಯಕ್ಷ ರಾಮಣ್ಣ ಮೇಲಾಂಟ, ಉದಯಕುಮಾರ್ ಮೇಲಾಂಟ, ಶಿವಪ್ರಸಾದ್ ಶೆಟ್ಟಿ ಮೊಗರೋಡಿ, ಶ್ರೀಶ ಎ. ಅಂಡಿಲ,
ಮಾದವ ಗೌಡ ಉರುಂಬಿತ್ತುಮಾರ್, ಮಮತಾ ಕೆ. ಅನಾಬೆ, ರವಿರಾಜ ಹೆಗ್ಡೆ ಪೊಯ್ಯ, ಬಾಬು ಗೌಡ ಮಡ್ಯಲಕಂಡ ಇವರುಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ಉಪಾಧ್ಯಕ್ಷ ಉದಯ ಕೋಟ್ಯಾನ್, ಜಿಲ್ಲಾ ನಿಕಟಪೂರ್ವ ಉಪಾಧ್ಯಕ್ಷ ಜಯರಾಮ ರೈ ಬಲಜ್ಜ, ನಿರ್ದೇಶಕ ಸವಿತಾ ಎನ್. ಶೆಟ್ಟಿ ನಿರ್ದೇಶಕ ಚಂದ್ರಶೇಖರ ರಾವ್, ನಿರ್ದೇಶಕ ಭರತ್ ನೆಕ್ರಾಜೆ, ವ್ಯವಸ್ತಾಪಕ ರವಿರಾಜ ಉಡುಪ, ನಿಕಟ ಪೂರ್ವ ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆ ಮಾತನಾಡಿ ಶುಭ ಹಾರೈಸಿದರು.
ನಿವೃತ್ತಿಗೊಂಡ ಕಾರ್ಯದರ್ಶಿ ಜಯರಾಮ ಶೆಟ್ಟಿಯವರು ಮಾತನಾಡಿ ತನ್ನ ಕಾರ್ಯವ್ಯಾಪ್ತಿ ಅವದಿಯಲ್ಲಿ ಸಹಕರಿಸಿದ ಅಧ್ಯಕ್ಷ ನಿರ್ದೇಶಕರಿಗೂ.ಹಾಲು ತಂದು ಹಾಲು ಕೊಟ್ಟು ಸಹಕರಿಸಿದ ಗ್ರಾಹಕರಿಗೂ ಧನ್ಯವಾದ ಸಲ್ಲಿಸಿದರು.
ನಿರ್ದೇಶಕ ಪ್ರಭಾಕರ ಅರಂಬೋಡಿ, ಸಿ ಎ ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ ಗ್ರಾ. ಪಂ. ಅಧ್ಯಕ್ಷ ಸೀತಾರಾಮ ಮಡಿವಾಳ, ಉಪ ವ್ಯವಸ್ಥಾಪಕ ಡಾ. ಸತೀಶ್ ರಾವ್, ಸಹಾಯಕ ವ್ಯವಸ್ಥಾಪಕ ಜಿತೇಂದ್ರ ಪ್ರಸಾದ್, ವಿಸ್ತರಣಾಧಿಕಾರಿ ರಾಜೇಶ್ ಪಿ. ಕಾಮತ್, ಬೆಳ್ತಂಗಡಿ ಸ ಅಭಿವೃದ್ಧಿ ಅಧಿಕಾರಿ ಬಿ.ವಿ.ಪ್ರತಿಮಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿಲ್ಪ, ಪಶು ವೈದ್ಯ ಕೃಷ್ಣ ಭಟ್, ಪದ್ಮುಂಜ ಹಾ. ಉ. ಸ. ಸಂಘದ ಉಪಾಧ್ಯಕ್ಷ ಉಮೇಶ್ ಗೌಡ, ಆಡಳಿತ ಮಂಡಳಿ ಸದಸ್ಯರಾದ ಸದಾಶಿವ ಶೆಟ್ಟಿ, ಶೀನಪ್ಪ ಗೌಡ, ರಾಜೇಶ್ ಎ.ಕರಿಯಪ್ಪ, ಪುರುಷೋತ್ತಮ ಗೌಡ, ಉಮೇಶ್ ಪೂಜಾರಿ.ರಮಾನಂದ ಎಂ.ಶಾರದಾ ಆರ್ ಗೌಡ.ಪ್ರತಿಮಾ.ಕ್ರಷ್ಣ ನಾಯ್ಕ, ಸುನಿಲ್ ಕುಮಾರ್, ಪದನಿಮಿತ್ತ ಸದಸ್ಯರಾದ ರಾಜೇಶ್ ಕಾಮತ್, ಮುಂದಿನ ಕಾರ್ಯದರ್ಶಿ ಯಂ.ಸತೀಶ್ ಕುಮಾರ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ತಿತರಿದ್ದರು.
ಗುಮಾಸ್ತೆ ಹೇಮಲತಾ ಪಿ. ವರದಿ ಓದಿದರು. ಸದಸ್ಯ ರಮಾನಂದ ಪೂಜಾರಿ ಸ್ವಾಗತಿಸಿದರು. ಸತೀಶ್ ಹೊಸ್ಮಾರು, ನವೀನ್ ಪೊಯ್ಯ, ಮಾದವ ಗೌಡ ದೊರ್ತೋಡಿ ಕಾರ್ಯಕ್ರಮ ನಿರೂಪಿಸಿದರು. ಪದನಿಮಿತ್ತ ಸದಸ್ಯರಾದ ರಾಜೇಶ್ ಕಾಮತ್ ಧನ್ಯವಾದ ಸಲ್ಲಿಸಿದರು. ವರದಿ: ಕಾಸಿಂ ಪದ್ಮುಂಜ