ಬೆಳಾಲು ಗ್ರಾಮ ಪಂಚಾಯತಿನಲ್ಲಿ ವಿಶೇಷ ಚೇತನರ, ಪೋಷಕರ ಸಂಘದ ಉದ್ಘಾಟನೆ

0

ಬೆಳಾಲು: ಗ್ರಾಮ ಪಂಚಾಯತಿನಲ್ಲಿ ಗ್ರಾಮ ಪಂಚಾಯತ್, ನಾಗಾಂಬಿಕಾ ಸಂಜೀವಿನಿ ಮಹಿಳಾ ಒಕ್ಕೂಟ ಮತ್ತು ಗ್ರಾಮೀಣ ಪುನರ್ವಸತಿ ಸಂಯೋಜಕರ ಕಾರ್ಯಾಲಯ ಗ್ರಾಮ ಪಂಚಾಯತ್ ಬೆಳಾಲು ಇವರ ಸಹಯೋಗದೊಂದಿಗೆ ಭಾಗ್ಯನಿಧಿ ಹಾಗೂ ನವಚೈತನ್ಯ ಎಂಬ 2 ವಿಶೇಷ ಚೇತನರ ಹಾಗೂ ಪೋಷಕರ ಸಂಘವನ್ನು ಮೇ.31ರಂದು ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಉದ್ಘಾಟಿಸಿ ವಿಕಲ ಚೇತನರು ಸಮಾಜದಲ್ಲಿ ಆರ್ಥಿಕವಾಗಿ ಸಬಲೀಕರಣ ಆಗಬೇಕು ಎಂದರು.

ಸಂಜೀವಿನಿ ವಲಯ ಮೇಲ್ವಿಚಾರಕ ಜಯಾನಂದ ವಿಶೇಷ ಚೇತನರ ಸಂಘ ರಚನೆಯ ಉದ್ದೇಶ, ಅದರ ನಿಯಮ ಹಾಗೂ ಸರಕಾರದಿಂದ ವಿಶೇಷ ಚೇತನರಿಗೆ ಸಿಗುವ ಸೌಲಭ್ಯದ ಬಗ್ಗೆ ಸಮಗ್ರವಾದ ಮಾಹಿತಿ ನೀಡಿದರು. ತಾಲೂಕು ವಿವಿದೋದ್ದೇಶ ಪುನರ್ವಸತಿ ಸಂಯೋಜಕ ಜಾನ್ ಡಿಸೋಜ ಮಾತನಾಡಿ ವಿಶೇಷ ಚೇತನರ ಇಲಾಖೆಯ ಪರವಾಗಿ ಸಹಾಯ ಸೌಲಭ್ಯದ ಕುರಿತು ಪೋಷಕರಿಗೂ ಫಲಾನುಭವಿಗಳಿಗೂ ಮಾಹಿತಿ ನೀಡಿದರು.

ವಿಶೇಷ ಚೇತನರು ಕೂಡ ಆರ್ಥಿಕವಾಗಿ ಸಬಲೀಕರಣವಾಗಬೇಕೆಂದು ತಿಳಿಸಿದರು. ಎರಡು ಸಂಘಗಳಿಂದ ಅಧ್ಯಕ್ಷ ಕಾರ್ಯದರ್ಶಿಯವರನ್ನು ಆಯ್ಕೆ ಮಾಡಿ ನಡಾವಳಿ ಪುಸ್ತಕ ಹಾಗೂ ಉಳಿತಾಯ ಪುಸ್ತಕವನ್ನು ವಿತರಿಸಲಾಯಿತು. ಸಂಜೀವಿನಿ ಒಕ್ಕೂಟದ ಎಂಬಿಕೆ ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾನಾಥ್ ನಾಯ್ಕ, ಒಕ್ಕೂಟದ ಕಾರ್ಯದರ್ಶಿ ಉಮಾದೇವಿ, ಸಂಜೀವಿನಿ ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕೃಷಿ ಸಖಿ ಸ್ವಾತಿ, ಪಶು ಸಖಿ ಯಶೋಧ, ಎಲ್.ಸಿ.ಆರ್.ಪಿ ಯವರಾದ ಸರಸ್ವತಿ ಹಾಗೂ ಗೀತಾ ಇವರು ಸಹಕರಿಸಿದರು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಈರಣ್ಣ ಇವರು ವಂದಿಸಿದರು.

LEAVE A REPLY

Please enter your comment!
Please enter your name here