ಶಿರ್ಲಾಲು: ಸುಶೀಲಾ ಪೂಜಾರಿ ಊರ ಇವರ ಮೂರನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಅವರ ಪುತ್ರ ಉದ್ಯಮಿ ಸುರೇಶ್ ಪೂಜಾರಿ ಊರ ಹಾಗೂ ಕುಟುಂಬಸ್ಥರಿಂದ ಆರೋಗ್ಯ ನಿಧಿ ವಿದ್ಯಾನಿಧಿ ಹಸ್ತಾಂತರ ಮಾಡಲಾಯಿತು.
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 88% ಅಂಕ ಪಡೆದ ಕರಂಬಾರು ಗ್ರಾಮದ ವಿದ್ಯಾರ್ಥಿ ಶಾಶ್ವತ್ ಇವರನ್ನು ಗೌರವಿಸಲಾಯಿತು. ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಕಾಪಿನಡ್ಕ ನಿವಾಸಿ ಮೀನಾಕ್ಷಿ ಇವರ ಚಿಕಿತ್ಸೆಗಾಗಿ ಧನ ಸಹಾಯ ನೀಡಲಾಯಿತು. ಸದಾನಂದ ಪೂಜಾರಿ ಉಂಗಿಲಬೈಲು, ಸುರೇಶ್ ಪೂಜಾರಿ ಅಭಿಮಾನಿ ಬಳಗದ ಸದಸ್ಯರು, ಕುಟುಂಬಸ್ಥರು ಉಪಸ್ಥಿತರಿದ್ದರು.