ಶಿಶಿಲದಿಂದ ಮುಂಜಾನೆ ಹೊರಡುತ್ತಿದ್ದ ಫಸ್ಟ್ ಬಸ್ ಮಾಯ- 50 ವರ್ಷಗಳಿಂದ ಸೇವೆ ನೀಡುತ್ತಿದ್ದ ಬಸ್ ನ್ನು ಪುನಃ ಆರಂಭಿಸಬೇಕು:ಗ್ರಾಮಸ್ಥರ ಪರವಾಗಿ ಪಂ. ಅಧ್ಯಕ್ಷ ಸುಧೀನ್ ಡಿ. ಬಿ.ಸಿ ರೋಡ್ ಕೆ.ಎಸ್.ಆರ್.ಟಿ.ಸಿ ಘಟಕಕ್ಕೆ ಪತ್ರ

0

ಶಿಶಿಲ: ಕೆ.ಎಸ್.ಆರ್.ಟಿ.ಸಿ. ಮಂಗಳೂರು ವಿಭಾಗದ ಬಿಸಿರೋಡ್ ಘಟಕದದಿಂದ ಪ್ರತಿದಿನ ಸಂಜೆ 3.00 ಘಂಟೆಗೆ ಮಂಗಳೂರು ಬಸ್ಸು ನಿಲ್ದಾಣದಿಂದ ಹೊರಟು ಬಿ.ಸಿ ರೋಡ್ ಉಪ್ಪಿನಂಗಡಿ, ನೆಲ್ಯಾಡಿ, ಕೊಕ್ಕಡ, ಮಾರ್ಗವಾಗಿ ಶಿಶಿಲ ತಲುಪಿ ಅಲ್ಲಿ ರಾತ್ರಿ ತಂಗಿ ಅಲ್ಲಿಂದ ಮರುದಿನ ಬೆಳಿಗ್ಗೆ 6.45ಕ್ಕೆ ಶಿಶಿಲ ದಿಂದ ಹೊರಟು ಬೆಳಿಗ್ಗೆ 10 ಗಂಟೆಗೆ ಮಂಗಳೂರು ತಲುಪಿ ಅಲ್ಲಿಂದ ಮತ್ತೆ 10.30 ಕ್ಕೆ ಪುನಃ ಹೊರಟು ಮಧ್ಯಾಹ್ನ 2.00 ಘಂಟೆ ಶಿಶಿಲ ತಲುಪಿ ಮತ್ತೆ 2.45 ಕ್ಕೆ ಶಿಶಿಲದಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಸರಕಾರಿ ಬಸ್ಸು ಸೇವೆಯು ಇತ್ತೀಚಿಗೆ ಸಂಚಾರ ನಿಲ್ಲಿಸಿದ್ದು, ಇದನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತೆ ಪ್ರಾರಂಭಿಸಬೇಕು.

ಮಂಗಳೂರು -ಶಿಶಿಲ ಸರಕಾರಿ ಬಸ್ಸು ಸೇವೆಯು ಸುಮಾರು 50 ವರ್ಷಗಳಿಗಿಂತ ಹೆಚ್ಚಿನ ಸಮಯಗಳಿಂದ ಹಲವಾರು ಗ್ರಾಮೀಣ ಪ್ರದೇಶಗಳ ಶಾಲಾ-ಕಾಲೇಜು ಮಕ್ಕಳ, ಹಿರಿಯರ, ಮಹಿಳೆಯರ ಸಂಚಾರಕ್ಕೆ ಇದ್ದ ಏಕೈಕ ಸಾರಿಗೆ ಬಸ್ಸು ಆಗಿರುತ್ತದೆ. ಅದು ಬಿಟ್ಟರೆ ಈ ಮಾರ್ಗವಾಗಿ ಸಂಚರಿಸುವ ಬೇರೆ ಯಾವುದೇ ಸರಕಾರಿ ಬಸ್ಸು ಇರುವುದಿಲ್ಲ.

ಆದುದರಿಂದ ಈಗ ಸಂಚಾರ ನಿಲ್ಲಿಸಿರುವ ಮಂಗಳೂರು-ಶಿಶಿಲ ಬಸ್ಸು ಸೇವೆಯನ್ನು ಮತ್ತೆ ಪ್ರಾರಂಭಿಸಬೇಕಾಗಿ ಶಿಶಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಿನ್ ಡಿ. ಗ್ರಾಮಸ್ಥರ ಪರವಾಗಿ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here