ಕಾಶಿಪಟ್ಣ: ಗ್ರಾಮ ಪಂಚಾಯತ್, ಗ್ರಾ. ಪಂ. ಅರಿವು ಕೇಂದ್ರದ ಸಹಭಾಗಿತ್ವದಲ್ಲಿ ಓದುವ ಬೆಳಕು ಅಂಗವಾಗಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವನ್ನು ಪಂಚಾಯತ್ ಅಧ್ಯಕ್ಷ ಸತೀಶ್ ಕೆ. ಹಾಗೂ ಶಿಬಿರಾರ್ಥಿಗಳಾದ ಮಕ್ಕಳು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಸ್ಟರ್ ಕೃತಿಕ್ ನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾಲತಾ ಹೆಚ್. ಇವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತನ್ನಾಡಿದರು. ಪಂಚಾಯತ್ ಉಪಾಧ್ಯಕ್ಷರು, ಸದಸ್ಯರು, ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯರು, ಪಂಚಾಯತ್ ಕಾರ್ಯದರ್ಶಿ, ಸಿಬ್ಬಂದಿ ವರ್ಗ, ಕಾಶಿಪಟ್ಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ವೃಂದಾ ಟಿ.ಎಸ್., ಪ್ರೌಢ ಶಾಲಾ ಶಿಕ್ಷಕರು ಹಾಗೂ ಶಿಬಿರದ ಸಂಪನ್ಮೂಲ ವ್ಯಕ್ತಿ ದೇವುದಾಸ್ ನಾಯಕ್, ಎಂ.ಬಿ.ಕೆ., ಎಲ್. ಸಿ. ಆರ್. ಪಿ., ವಿ. ಆರ್. ಡಬ್ಲ್ಯೂ ಉಪಸ್ಥಿತರಿದ್ದರು. ಗ್ರಂಥಾಲಯ ಮೇಲ್ವಿಚಾರಕಿ ಸುರೇಖಾ ಇವರು ಧನ್ಯವಾದವನ್ನಿತ್ತರು. ಸಂಪನ್ಮೂಲ ವ್ಯಕ್ತಿ ದೇವುದಾಸ್ ನಾಯಕ್ ಮಕ್ಕಳಿಗೆ ಬಹಳ ಉತ್ತಮ ರೀತಿಯಲ್ಲಿ ಮನೋರಂಜನಾ ಚಟುವಟಿಗಳನ್ನು ನಡೆಸಿಕೊಟ್ಟರು.