ಬೆಳ್ತಂಗಡಿ: ತಾಲೂಕು ಮೇಲಂತಬೆಟ್ಟು ಸರಕಾರಿ ಪ್ರಥಮ ದರ್ಜೆ ಕಾಲೇಜಿನ 2005ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳು 18 ವರ್ಷಗಳ ಆನಂತರ ಒಟ್ಟು ಸೇರಿ ಚಿಂತಿಸಿ. ವಿಶೇಷವೂ, ವಿಭಿನ್ನವೂ ಆದ ಕಾರ್ಯಕ್ರಮವೊಂದನ್ನು ಅವರ ಕಾಲೇಜಿನಲ್ಲಿ ಆಯೋಜಿಸಬೇಕೆಂದು ತೀರ್ಮಾನಿಸಿದ್ದಾರೆ. ಅವರ ಚಿಂತನೆಯ ಫಲವಾಗಿ ‘ಸ್ನೇಹ ಸಮ್ಮಿಲನ’ ಎಂಬ ಸಮಾರಂಭವೊಂದು ಕಾರ್ಯರೂಪಕ್ಕೆ ಬಂದಿದೆ.
ಸ್ನೇಹ ಸಮ್ಮಿಲವೆಂಬುದು ಸಾಮಾನ್ಯ ಅರ್ಥದಲ್ಲಿ ಉಂಡು-ತಿಂದು ಸಂಭ್ರಮಿಸುವ ಕಾರ್ಯಕ್ರಮವಾಗಿದ್ದು, ಹಾಗಾಗದೆ ಧನಾತ್ಮಕ ಫಲಶೃತಿ ಒದಗುವ ಕಾರ್ಯಕ್ರಮವಾಗಬೇಕೆಂದು ರಕ್ತದಾನ, ನೇತ್ರದಾನ, ಅನ್ನದಾಸೋಹ, ಗುರುವಂದನೆ ಮತ್ತು ಬಡ ಹತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನಗಳೆಂಬ 5 ವಿಶೇಷ ವಿಷಯಗಳನ್ನು ಒಳಗೊಂಡು ಈ ಸಮಾರಂಭವು ವಿನೂತನ ಕಾರ್ಯಕ್ರಮವಾಗಿ ಮೂಡಿಬರಲಿದೆ.
ಮೇ. 10ರಂದು ಸಮಯ 9.30ಕ್ಕೆ ಸರಿಯಾಗಿ ಸ್ನೇಹ ಸಮ್ಮಿಲನವು ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.