ಮುಂಡಾಜೆ: ಶ್ರೀರಾಮ ಭಜನಾ ಮಂಡಳಿ ಮೂಲಾರು ಮುಂಡಾಜೆಯಲ್ಲಿ ನಡೆದಂತಹ ಕುಣಿತ ಭಜನಾ ತಂಡದ ಗುರುಗಳಾದ ನಾಗೇಶ್ ಬಿ. ನೆರಿಯ ಇವರ ನೇತೃತ್ವದಲ್ಲಿ ನಡೆದಂತಹ ಕುಣಿತ ಭಜನಾ ಕಮ್ಮಟೋ ತ್ಸವದ ವಿದ್ಯಾಭ್ಯಾಸದಲ್ಲಿ ಪ್ರತಿಭಾನ್ವಿತ 300 ಮಕ್ಕಳ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಗಾನಸುರಭಿ ತಂಡದಿಂದ ಭಕ್ತಿಯ ಜೇಂಕಾರಕ್ಕೆ ಭಜನಾ ಮಂಡಳಿಯ ಎಲ್ಲಾ ಸದಸ್ಯರು ಹೆಜ್ಜೆ ಹಾಕಿದರು. ವಿಶೇಷ ಆಕರ್ಷಣೆಯಾಗಿ ವಿಘ್ನೇಶ್ ನಾರಾವಿ ಇವರಿಂದ ಚೆಂಡೆ ಸೇವೆ ಇತ್ತು. ಊರ ಎಲ್ಲಾ ಭಕ್ತರ ಹಾಗೂ ಭಜನಾ ಮಂಡಳಿಯ ಪೋಷಕರು ಭಾಗವಹಿಸಿದರು. ಹಾಗೂ ಧರ್ಮಸ್ಥಳ ಭಜನಾ ಕಮ್ಮಟೋತ್ಸವದ ಸಂಪನ್ಮೂಲ ವ್ಯಕ್ತಿ ಸ್ವಸ್ತಿಶ್ರೀ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂದೇಶ ಮದ್ದಡ್ಕ ಹಾಗೂ ಭಜನಾ ಪರಿಷತ್ತಿನ ಅಧ್ಯಕ್ಷರು, ರಾಜ್ಯ ಅಧ್ಯಕ್ಷರು ಹಾಗೂ ಪಂಚಾಯತ್ ಅಧ್ಯಕ್ಷರು ಹಾಗೂ ಶಾಲಾ ಸಮಿತಿಯ ಅಧ್ಯಕ್ಷರು ಊರವರು ಭಾಗವಹಿಸಿದರು. ಸುರೇಶ್ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.