

ಬೆಳ್ತಂಗಡಿ: ಪಾದೆಗುತ್ತು ಲಿಂಗಪ್ಪ ಮಾಸ್ಟರ್ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ನಡೆಸುತ್ತಿರುವ ಎಲ್. ಸಿ. ಆರ್. ಇಂಡಿಯನ್ ಪದವಿ ಕಾಲೇಜು ಇಲ್ಲಿನ ಬಿ. ಕಾಂ. ವಿಭಾಗದ ವಿದ್ಯಾರ್ಥಿಗಳು
ಮಾ. 18ರಂದು ವಿವೇಕಾನಂದ ಕಾಲೇಜ್ ಪುತ್ತೂರು, ವಿವೇಕಾನಂದ ಜಯಂತಿಯ ಅಂಗವಾಗಿ ನಡೆಸಿರುವ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆ “ವಿವೇಕೋತ್ಸವ –25 ” ರಲ್ಲಿ ಭಾಗವಹಿಸಿ, ದ್ವಿತೀಯ ಬಿ. ಕಾಂ ವಿಭಾಗದ ವಿದ್ಯಾರ್ಥಿ ಸಫಾ ತಸ್ಮಿಯಾ “ಕನ್ನಡ ಪ್ರಬಂಧ”ದಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ. ಹಾಗು ಪ್ರಥಮ ಬಿ. ಕಾಂ ವಿಭಾಗದ ವಿದ್ಯಾರ್ಥಿ ಸುರಯ್ಯಾ ಬಾನು “ಬಿಸಿನೆಸ್ ಕ್ವಿಜ್” ನಲ್ಲಿ ದ್ವಿತೀಯ ಸ್ಥಾನ ಗಳಿಸಿ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ.
ಇವರನ್ನು ಸಂಸ್ಥೆಯ ಪ್ರಾಂಶುಪಾಲರು, ಸಂಯೋಜಕರು ಹಾಗು ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿರುತ್ತಾರೆ.