ಮಾ. 5-8: ಬಂಗಾಡಿ ಹಾಡಿದೈವ ಉಳ್ಳಾಕುಳ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ

0

ಬೆಳ್ತಂಗಡಿ: ಇತಿಹಾಸ ಪ್ರಸಿದ್ದ ಬಂಗಾಡಿ ಹಾಡಿದೈವ ಉಳ್ಳಾಕುಳ ಕ್ಷೇತ್ರದಲ್ಲಿ ಚಂಡಿಕಾ ಯಾಗ ಹಾಗೂ ವರ್ಷಾವಧಿ ಜಾತ್ರೆ ಮಹೋತ್ಸವ ವೇದಮೂರ್ತಿ ಶ್ರೀ ಶ್ರೀಕಾಂತ ಭಟ್ ಪೌರೋಹಿತ್ಯದಲ್ಲಿ ಮಾ.5 ರಿಂದ 8 ರವರೆಗೆ ನಡೆಯಲಿದೆ.

ಮಾ.5ರಂದು ಸಂಜೆ ಗಂಟೆ 4-30ಕ್ಕೆ ಗ್ರಾಮಸ್ಥರಿಂದ ಹೊರೆ ಕಾಣಿಕೆಯನ್ನು ಕ್ಷೇತ್ರಕ್ಕೆ ಬರಮಾಡಿಕೊಳ್ಳುವುದು, ರಾತ್ರಿ ಭಂಡಾರ ಬರುವುದು, ತೊಡರಬಲಿ ಉಗ್ರಾಣ ಮುಹೂರ್ತ ನಡೆಯಲಿದೆ.

ಫೆ.6 ರಂದು ಬೆಳಿಗ್ಗೆ ಉಳ್ಳಾಕುಳ ಸನ್ನಿಧಿಯಲ್ಲಿ ನವಕ ಕಲಶ, ಪ್ರಧಾನ ಹೋಮ, ಧ್ವಜಾರೋಹಣ, ಕಲಶಾಭಿಷೇಕ, ಪಂಚಪರ್ವ ಸಂಕ್ರಾಂತಿ, 12 ತೆಂಗಿನಕಾಯಿಗಳ ಗಣಹೋಮ, ಚಂಡಿಕಾಯಾಗ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.

ಮಾ.7 ಬೆಳಿಗ್ಗೆ ಪಂಚಪರ್ವ ಸಂಕಾಂತ್ರಿ, ಶ್ರೀ ನಾಗ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಆಶ್ಲೇಷಾ ಬಲಿ, ನಾಗತಂಬಿಲ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ರಾತ್ರಿ 9ರಿಂದ ಗಂಟೆ 10ರ ತನಕ ಉಳ್ಳಾಲ್ತಿ ಸನ್ನಿಧಿಯಲ್ಲಿ ಹೂವಿನ ಪೂಜೆ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿರುವುದು ಹಾಗೂ ರಾತ್ರಿ ಗಂಟೆ 11-00ರಿಂದ ಭೈರವ ಪಿಲಿಚಾಮುಂಡಿ ಮೂರ್ತಿಲ್ಲಾಯ ದೈವಗಳ ನೇಮ ನಂತರ ಧ್ವಜಾವರೋಹಣ ನಡೆಯಲಿದೆ.

ಮಾ.8ರಂದು ರಾತ್ರಿ 8ರಿಂದ ಕಲ್ಕುಡ, ಕಲ್ಲುರ್ಟಿ, ಕಾಳಮ್ಮ ದೈವಗಳ ನೇಮ ನಡೆಯಲಿದೆ ಎಂದು ದೇವಸ್ಥಾನದ ಅನುವಂಶಿಕ ಅಸ್ರಣ್ಣರಾದ ಎಸ್.ಗೋಪಾಲಕೃಷ್ಣ ಉಪಾಧ್ಯಾಯ ಹಾಗೂ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ.ಎಸ್.ಮುಕುಂದ ಸುವರ್ಣ ಹೇಳಿದ್ದಾರೆ.

LEAVE A REPLY

Please enter your comment!
Please enter your name here