ತೋಟತ್ತಾಡಿ: ಉಳಾಳ್ತಿ ಗೆಳೆಯರ ಬಳಗ ದ 40-41ನೇ ಸೇವಾ ಯೋಜನೆಯಾಗಿ ಬುಲಪ್ಪ ದಾಮೋಧರ ಪೂಜಾರಿಯವರ ಮಗ ಜಯರಾಮ ಹೃದಯಘಾತದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ. ಯುವಕನ ಮನೆಗೆ 20,000 ಚೆಕ್ ಮೂಲಕ ವಿತರಣೆ ನಡೆಯಿತು. ಹಾಗೂ ಮೋನಮ್ಮ ಅನಾರೋಗ್ಯದಿಂದ ಮನೆಯಲ್ಲಿ ವಿಶ್ರಾಂತಿ ಇದ್ದು ಅವರಿಗೆ 5000ದ ಚೆಕ್ ವಿತರಿಸಲಾಯಿತು.
ಗೆಳೆಯ ಬಳಗದ ಕಾರ್ಯದರ್ಶಿ ನಾರಾಯಣ ಶೆಟ್ಟಿ ಭಜನ ಮಂಡಳಿ, ಅಧ್ಯಕ್ಷ ದಿನೇಶ್ ನಾಯ್ಕ್, ಸದಸ್ಯರಾದ ರಮಾನಂದ ಪೂಜಾರಿ, ನಾರಾಯಣ ಶೆಟ್ಟಿ ನಿಸರ್ಗ, ದಿವಾಕರ ಪೂಜಾರಿ ವಳಚ್ಚಿಲ್, ಸಂತೋಷ್ ಶೆಟ್ಟಿ, ಸುಜಿತ್ ಶೆಟ್ಟಿ, ಪ್ರಶಾಂತ್ ಪೂಜಾರಿ, ದಿವಾಕರ ಪಾಪಿತ್ತಿಲು, ಹರೀಶ್ ಶೆಟ್ಟಿ ಉಪಸ್ಥಿರಿದ್ದರು.