ಶಿಬಾಜೆ :ಉಪ್ಪಿನಂಗಡಿ ಅರಣ್ಯ ವ್ಯಾಪ್ತಿಯ ಶಿಬಾಜೆಯಲ್ಲಿ ಕಾಡು ಕೋಣ ಭೇಟೆ – ಅರಂಪಾದೆ ಕಡಮ್ಮಚಲ್ ನಿವಾಸಿ ರಾಜು ಎಂಬವರ ಮನೆಗೆ ದಾಳಿ -ಮಾಂಸ ಪತ್ತೆ

0

ಶಿಬಾಜೆ :ಉಪ್ಪಿನಂಗಡಿ ಅರಣ್ಯ ವ್ಯಾಪ್ತಿಯ ಶಿಬಾಜೆಯಲ್ಲಿ ಶುಕ್ರವಾರ ಅ. 11ರಂದು ಕಾಡು ಕೋಣ ಭೇಟೆಯಾಡಿರುವ ಗುಪ್ತ ಮಾಹಿತಿಯೊಂದಿಗೆ ಉಪ್ಪಿನಂಗಡಿ ವಲಯ ಅರಣ್ಯಧಿಕಾರಿ ರಾಘವೇಂದ್ರ ಅವರ ತಂಡ ಶಿಬಾಜೆ ಆರಂಪಾದೆ ಕಡಮ್ಮಚಲ್ ನಿವಾಸಿ ರಾಜು ಎಂಬವರ ಮನೆಗೆ ಧಾಳಿ ಮಾಡಿದಾಗ ಮನೆಯಲ್ಲಿ ಪ್ಲಾಸ್ಟಿಕ್ ಟಾರ್ಪಲ್ ನಲ್ಲಿ ಒಣಗಳು ಹಾಕಿರುವ ಮಾಂಸದ ತುಂಡುಗಳು, ಮನೆಯ ಕೊಟ್ಟಿಗೆಯಲ್ಲಿ ಮರದ ತುಂಡುಗಳ ಮೇಲೆ ಒಣಗಳು ಹಾಕಿರುವ ಮಾಂಸದ ತುಂಡುಗಳು ಪತ್ತೆಯಾಗಿವೆ.

ರಾಜು ಎಂಬವರಲ್ಲದೆ ಇದರಲ್ಲಿ ಇನ್ನೂ 3ಜನ ಸ್ಥಳೀಯರು ಭಾಗಿಯಾಗಿರುವ ಮಾಹಿತಿ ಅರಣ್ಯ ಅಧಿಕಾರಿಯವರಿಗೆ ಸಿಕ್ಕಿದ್ದು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಅರಣ್ಯ ಇಲಾಖೆ ಶೋಧ ಮುಂದುವರೆಸಿದೆ.

LEAVE A REPLY

Please enter your comment!
Please enter your name here