ಅತ್ತಾಜೆ ರಮೇಶ್ ಭಟ್ ರವರ ಪುತ್ರ ಆದಿತ್ಯ ಭಟ್ ಹೃದಯಾಘಾತದಿಂದ ನಿಧನ

0


ಉಜಿರೆ: ಇಲ್ಲಿನ ಅತ್ತಾಜೆಯ ರಮೇಶ್ ಭಟ್ ಮತ್ತು ಶಾರದಾ ದಂಪತಿಯ ಪುತ್ರ ಆದಿತ್ಯ ಭಟ್ (29ವ) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅಕ್ಟೋಬರ್ 11ರಂದು ಮನೆಯಲ್ಲಿ ನಡೆಯ ಆಯುಧ ಪೂಜೆಯ ಸಂಭ್ರಮದಲ್ಲಿ ಸಂಪೂರ್ಣ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಆದಿತ್ಯಗೆ ಎದೆನೋವು ಕಾಣಿಸಿಕೊಂಡ ನಂತರ ಹೃದಯಾಘಾತವಾಗಿದೆ. ಪ್ರತಿಭಾನ್ವಿತರಾಗಿದ್ದ ಆದಿತ್ಯ ರವರು ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು ಜರ್ಮನಿಯಲ್ಲಿ‌ ತನ್ನದೇ ಸ್ಟಾರ್ಟ್ ಅಪ್‌ ಕಂಪೆನಿ ಮುನ್ನಡೆಸುತ್ತಿದ್ದರು. ಇವರು ತಂದೆ ರಮೇಶ್ ಭಟ್, ತಾಯಿ ಶಾರದಾ ಹಾಗೂ ಸಹೋದರಿ ಹಾಗೂ ಕುಟುಂಬವರ್ಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here