ಬೆಳ್ತಂಗಡಿ: ಗೃಹರಕ್ಷಕದಳದ ಕಚೇರಿಯಲ್ಲಿ ಆಯುಧ ಪೂಜೆ

0

ಬೆಳ್ತಂಗಡಿ: ನವರಾತ್ರಿ ಪ್ರಯುಕ್ತ ಬೆಳ್ತಂಗಡಿ ಗೃಹರಕ್ಷಕ ದಳದ ಕಚೇರಿಯಲ್ಲಿ ಅ.8ರಂದು ಆಯುಧ ಪೂಜೆ ಹಾಗೂ ಲಕ್ಷ್ಮೀ ಪೂಜೆ ನೆರವೇರಿತು.ಈ ವೇಳೆ ರಾಷ್ಟ್ರಪತಿ ಪದಕ ಪಡೆದ ದ.ಕ.ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಡಾ.ಮುರಳಿ ಮೋಹನ್ ಚುಂತಾರ್ ಅವರನ್ನು ಬೆಳ್ತಂಗಡಿ ಘಟಕದ ವತಿಯಿಂದ ಗೌರವಿಸಲಾಯಿತು.

ಗೃಹರಕ್ಷಕದಳದ ನಿವೃತ್ತ ಸಿಬಂದಿ ಭಾಸ್ಕರ ಪೂಜಾರಿ ಅವರನ್ನು ಗೌರವಿಸಲಾಯಿತು.

ಈ ವೇಳೆ ತಾ.ಪಂ. ಇಒ ಭವಾನಿ ಶಂಕರ್, ವ್ಯವಸ್ಥಾಪಕ ಪ್ರಶಾಂತ್, ಬೆಳ್ತಂಗಡಿ ವೃತ್ತ ಪೊಲೀಸ್ ಇನ್ ಸ್ಪೆಕ್ಟರ್ ಸುಬ್ಬಾಪುರ್ ಮಠ್, ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಸಂಚಾರ ಪೊಲೀಸ್ ಉಪನಿರೀಕ್ಷಕ ಅರ್ಜುನ್, ಬೆಳ್ತಂಗಡಿ ಘಟಕಾಧಿಕಾರಿ ಜಯಾನಂದ್ ಲಾಯಿಲ, ಕಂದಾಯ ಇಲಾಖೆ ಉಪ ತಹಶೀಲ್ದಾರ್ ಜಯಾ, ಸಹಿತ ಗೃಹರಕ್ಷಕ ದಳದ ಸಿಬಂದಿ, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here