ನಾಲ್ಕೂರು: ಮಜ್ಜೆನಿಯಲ್ಲಿ ಹೆಬ್ಬಾವು ಹಿಡಿದು ಕಾಡಿಗೆ ಬಿಟ್ಟ ಸುರೇಶ್ ಪೂಜಾರಿ ಪಾಡಿ

0

ಬಳಂಜ: ನಾಲ್ಕೂರು ಗ್ರಾಮದ ಮಜ್ಜೆನಿ ವಸಂತ ಸಾಲಿಯಾನ್ ರವರ ತೋಟದಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿದ್ದು ಇದನ್ನು ಸ್ಥಳೀಯರಾದ ಸುರೇಶ್ ಪೂಜಾರಿ ಪಾಡಿ ಹಾಗೂ ಶೇಖರ್ ರವರು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಮಳೆಗಾಲದಲ್ಲಿ ಹತ್ತಿರದ ಕಾಡುಗಳಿಂದ ಹೆಬ್ಬಾವುಗಳು ಹೆಚ್ಚಾಗಿ ತೋಟದ ಪರಿಸರಕ್ಕೆ ಬರುತ್ತಿದ್ದು ಅವಕಾಶ ಸಿಕ್ಕರೆ ಕೋಳಿ ಅಥವಾ ನಾಯಿ, ಬೆಕ್ಕುಗಳನ್ನು ಕೊಂದು ತಿನ್ನುತ್ತದೆ ಎಂದು ವಸಂತ ಸಾಲಿಯಾನ್ ಮಜ್ಜೆನಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here