ಬೆಳ್ತಂಗಡಿ: ಶ್ರೀ ಗುರುದೇವ ಪದವಿ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧೀ ಜಯಂತಿ ಪ್ರಯುಕ್ತ ಸ್ವಚ್ಚತಾ ಹೀ ಭಾರತ ಅಭಿಯಾನ

0

ಬೆಳ್ತಂಗಡಿ: ಶ್ರೀ ಗುರುದೇವ ಪದವಿ ಮತ್ತು ಪದವಿ ಪೂರ್ವ ಕಾಲೇಜು ಇದರ ಎನ್ ಎಸ್ ಎಸ್ ಘಟಕ ಮತ್ತು ರೋವರ್ಸ್ ಹಾಗೂ ರೇಂಜರ್ಸ್ ವತಿಯಿಂದ ಗಾಂಧೀ ಜಯಂತಿ ಪ್ರಯುಕ್ತ ಕಾಲೇಜು ಆವರಣದಲ್ಲಿ ಸ್ವಚ್ಚತಾ ಹೀ ಭಾರತ ಅಭಿಯಾನ ಅ.2ರಂದು ಕಾರ್ಯಕ್ರಮ ನಡೆಯಿತು.

ಕಾಲೇಜು ಆಡಳಿತ ಸಮಿತಿಯ ಸದಸ್ಯೆ ಬಿನುತ ವಿ.ಬಂಗೇರ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್, ಉಪಪ್ರಾಂಶುಪಾಲ, ಪದವಿ ವಿಭಾಗದ ಎನ್ ಎಸ್ ಎಸ್ ಶಿಬಿರಾಧಿಕಾರಿ ಬಿ. ಎ. ಶಮಿಯುಲ್ಲ, ರೋವರ್ಸ್-ರೇಂಜರ್ಸ್ ಘಟಕಾಧಿಕಾರಿ ಶುಭಲಕ್ಷ್ಮಿ, ರಾಕೇಶ್ ಕುಮಾರ್ ಪದವಿ ವಿಭಾಗದ NSS ಘಟಕದ ಸಹಶಿಬಿರಾಧಿಕಾರಿಗಳಾದ ಸತೀಶ್ ಸಾಲ್ಯಾನ್, ಶ್ವೇತಾ, ಪದವಿ ಪೂರ್ವ ವಿಭಾಗದ ಶಿಬಿರಾಧಿಕಾರಿಗಳಾದ ಶಿವರಾಜ್ ಗಟ್ಟಿ, ಚಂದನಾ, ಸೌಜನ್ಯ, ಕಾಲೇಜಿನ ಶಾರೀರಿಕ ನಿರ್ದೇಶಕ ರವಿರಾಮ ಶೆಟ್ಟಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕ ಅನೂಪ್ ಬಂಗೇರ, ಕಾಲೇಜಿನ ಸಿಬ್ಬಂದಿ ಜನಾರ್ಧನ ಕುಲಾಲ್, ಉಪನ್ಯಾಸಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದು ಸಹಕರಿಸಿದರು.

LEAVE A REPLY

Please enter your comment!
Please enter your name here