ಬಸ್ ನಲ್ಲಿ ಸಿಕ್ಕಿದ್ದ ಅಗತ್ಯ ದಾಖಲೆಗಳಿರುವ ಪರ್ಸನ್ನು ವಾರೀಸುದಾರರಿಗೆ ತಲುಪಿಸುವಲ್ಲಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್ ಮತ್ತು ಕ್ಲೀನರ್

0

ರಝಾನಗರ: ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಇಲ್ಲಿಯ ಶಿಕ್ಷಕಿಯ ಅಗತ್ಯ ದಾಖಲೆಗಳು ಮತ್ತು ಹಣವಿರುವ ಪರ್ಸ್ ಕಳೆದು ಹೋಗಿತ್ತು. ವಾಮದಪದವಿನಿಂದ ವೇಣೂರಿಗೆ ಕಲಾಬಾಗಿಲು ಮಾರ್ಗವಾಗಿ ಸಂಚರಿಸುವ ಗಾಯತ್ರಿ ಬಸ್ಸಿನಲ್ಲಿ ಬಿದ್ದಿತ್ತು, ನಾರವಿಯಲ್ಲಿ ಬಸ್ ಕ್ಲೀನ್ ಮಾಡುವಾಗ ನಾರವಿ ಅರಸಿಕಟ್ಟೆಯ ಸುಂದರ್ ಹೆಗ್ಡೆಯವರ ಮಗ ಸುಧೀರ್ ಹೆಗ್ಡೆ ಎಂಬವರಿಗೆ ಸಿಕ್ಕಿದ್ದು, ಕಂಡಕ್ಟರ್ ಶೇಖರ್ ರರಿಗೆ ನೀಡಿ ಅದರ ವಾರೀಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಇವರ ಪ್ರಾಮಾಣಿಕತೆ ಮೆಚ್ಚಿ ಬುರೂಜ್ ಶಾಲಾ ಸಂಚಾಲಕ ಶೇಖ್ ರಹ್ಮತ್ತುಲ್ಲಾಹ್ ಸುಧೀರ್ ಹೆಗ್ಡೆಯವರಿಗೆ ಮತ್ತು ಶೇಖರ್ ರವರಿಗೆ ಹಾರ ಹಾಗೂ ಶಾಲು ಹಾಕಿ ಗೌರವಿಸಿದ್ದಾರೆ. ಇವರ ಪ್ರಾಮಾಣಿಕತೆ ಇತರರಿಗೂ ಮಾದರಿಯಾಗಿದೆ.

LEAVE A REPLY

Please enter your comment!
Please enter your name here