ನೆಲ್ಯಾಡಿ ಕಾಲೇಜಿಗೆ ಹೋಗಿದ್ದ ಅರಸಿನಮಕ್ಕಿಯ ತೀರ್ಥೇಶ್ ನಾಪತ್ತೆ ಪ್ರಕರಣ – ಬೆಂಗಳೂರಿನ ಹೊಸೂರಿನಲ್ಲಿ ತೀರ್ಥೇಶ್ ಪತ್ತೆ

0

ಅರಸಿನಮಕ್ಕಿ: ನೆಲ್ಯಾಡಿಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎ. ಓದುತ್ತಿರುವ ಅರಸಿನಮಕ್ಕಿಯ ವಿದ್ಯಾರ್ಥಿ ತೀರ್ಥೇಶ್ ಎಂ.(18) ನಾಪತ್ತೆಯಾಗಿರುವ ಬಗ್ಗೆ ಆತನ ತಂದೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.

ಸೆ. 27ರಂದು ಹೊಸೂರಿನಲ್ಲಿ ಶಿವಮೊಗ್ಗ ಮೂಲದ ವ್ಯಕ್ತಿ ಒಬ್ಬರು ತೀರ್ಥೇಶ್ ನಾಪತ್ತೆ ಸುದ್ದಿ ಮೊಬೈಲ್, ವಾಟ್ಸಪ್ ಮೂಲಕ ಹರಿದಾಡುತ್ತಿರುವುದನ್ನು ಗಮನಿಸಿದಾತ ಈತನನ್ನು ಪತ್ತೆ ಹಚ್ಚಿ ವಿಚಾರಿಸಿದಾಗ ಮನೆಯ ಮೊಬೈಲ್ ಸಂಖ್ಯೆ ನೀಡಿದ್ದು ತಕ್ಷಣ ಮನೆಗೆ ಕರೆ ಮಾಡಿ ಮಗನನ್ನು ಕರೆದುಕೊಂಡು ಹೋಗುವಂತೆ ತಿಳಿಸಿದ್ದು, ತೀರ್ಥೇಶ್ ನ ತಂದೆ ವಿಜಯಚಂದ್ರ ರವರು ಉಪ್ಪಿನಂಗಡಿ ಠಾಣೆ ಗೆ ಕರೆ ಮಾಡಿ ಪೋಲಿಸರಿಗೆ ಮಾಹಿತಿ ನೀಡಿ ಪೊಲೀಸರನ್ನು ಕರೆದುಕೊಂಡು ಬೆಂಗಳೂರಿಗೆ ತೆರಳಿ ಮಗನನ್ನು ಕರೆದುಕೊಂಡು ಬಂದಿರುತ್ತಾರೆ.

LEAVE A REPLY

Please enter your comment!
Please enter your name here