ಕೊಕ್ಕಡದಿಂದ ಹಳ್ಳಿಂಗೇರಿ ಹೋಗುವ ರಸ್ತೆಯ ಹೊಂಡ ಗುಂಡಿಗಳನ್ನು ಮುಚ್ಚಿದ ಆಟೋ ಚಾಲಕರು

0

ಕೊಕ್ಕಡ: ನೆಲ್ಯಾಡಿ, ಪಟ್ರಮೆ, ಹಳ್ಳಿoಗೇರಿ ಮಾಯಿಲ ಕೋಟೆ ಇನ್ನೂ ಹಲವು ಕಡೆಗಳಿಗೆ ಸಂಪರ್ಕಿಸುವ ಕೊಕ್ಕಡದ ಪ್ರಮುಖ ರಸ್ತೆ ಹೊಂಡ ಗುಂಡಿಗಳಿಂದ ಕೂಡಿದ್ದು ಸಂಚಾರ ದಟ್ಟನೆ ಇರುವ ಈ ರಸ್ತೆಯ ಅಗಲ ಕೂಡ ಕಡಿಮೆ ಇದ್ದು ದಿನ ನಿತ್ಯ ಪ್ರಯಾಣಿಸುವ ರಿಕ್ಷಾ ಚಾಲಕರಿಗೆ ದೊಡ್ಡ ಸಮಸ್ಯೆಯಾಗುತ್ತಿತ್ತು.

ಇದನ್ನು ಮನಗಂಡ ಕೊಕ್ಕಡದ ರಿಕ್ಷಾ ಚಾಲಕರಾದ ಸಂದೀಪ್, ಉಮೇಶ್, ಸಚಿನ್, ಟಿ.ಎಲ್ ಪ್ರಮೋದ್ ಬದಿಯಡ್ಕ, ಚಂದ್ರ, ಜಿತೇಶ್, ಕೃಷ್ಣ ಮುಂತಾದವರು ಸೇರಿ ಕೆಂಪು ಕಲ್ಲು ಸಂಗ್ರಹಿಸಿ ಪಿಕಪ್ ವಾಹನದ ಮೂಲಕ ತಂದು ಹೊಂಡ ಗುಂಡಿಗಳನ್ನು ಮುಚ್ಚಿ ರಸ್ತೆಗೆ ತಾತ್ಕಾಲಿಕ ಪರಿಹಾರ ಮಾಡಿದ್ದಾರೆ.

ಇವರಿಗೆ ದೇವಿಪ್ರಸಾದ್ ಪಿಕಪ್ ನ ಮಾಲಕ ಸತೀಶ್ ಬದಿಯಡ್ಕ ಸಹಕಾರ ನೀಡಿದ್ದು, ಇವರ ಸಮಾಜಮುಖಿ ಕೆಲಸಕ್ಕೆ ಊರವರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

LEAVE A REPLY

Please enter your comment!
Please enter your name here