ಮಿತ್ತಬಾಗಿಲಿನಲ್ಲಿ ಯುವವಾಹಿನಿ ಡೆನ್ನಾನ ಡೆನ್ನಾನ-2024 ಆಮಂತ್ರಣ ಪತ್ರಿಕೆ ಬಿಡುಗಡೆ

0

ಕಿಲ್ಲೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಬೆಳ್ತಂಗಡಿ ಘಟಕದ ಆತಿಥ್ಯದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ನಡೆಯುವ ಯುವವಾಹಿನಿ ಅಂತರ ಘಟಕ ಸಾಂಸ್ಕೃತಿಕ ಸ್ಪರ್ದೆ ಡೆನ್ನಾನ ಡೆನ್ನಾನ-2024 ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮಿತ್ತಬಾಗಿಲು ಗ್ರಾಮದ ಕುರುಬರ ಗುಡ್ಡೆ ಎಂಬಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಬಳಿ ನಡೆಯಿತು.

ಈ ಸಂದರ್ಭದಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಸದಾಶಿವ ಪೂಜಾರಿ, ಊರ ಗೌರವ ಸಹೆಗಾರ ರಮಾನಂದ ಸಾಲಿಯಾನ್, ಕಾರ್ಯದರ್ಶಿ ಯಶೋಧರ ಮುಂಡಾಜೆ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ನಿರ್ದೇಶಕ ಜಯ ಕುಮಾರ್ ನಡ, ಯುವಬಿಲ್ಲವ ವೇದಿಕೆ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಎಮ್.ಕೆ ಪ್ರಸಾದ್, ಮಿತ್ತಬಾಗಿಲು- ಮಲವಂತಿಗೆ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಹಂಗಾಮಿ ಅಧ್ಯಕ್ಷ ಸ್ವಸ್ತಿಕ್ ಕಂಬಳದಡ್ಡ, ಕಾರ್ಯದರ್ಶಿ ಮೋಹನ್ ಸುವರ್ಣ, ಯುವಬಿಲ್ಲವ ವೇದಿಕೆ ಅಧ್ಯಕ್ಷ ಗುರುರಾಜ್ ಕಿಲ್ಲೂರು, ಕಾರ್ಯದರ್ಶಿ ಸುರೇಂದ್ರ ಬದನಬಾಗಿಲು, ಯುವವಾಹಿನಿ ಸಂಚಾಲನ ಸಮಿತಿ ಅಧ್ಯಕ್ಷ ನಿತೇಶ್ ಅಡ್ಕದಕರೆ, ಕಾರ್ಯದರ್ಶಿ ಹರೀಶ್ ಪೂಜಾರಿ ಮಾಲೂರು, ಮಾಜಿ ಅಧ್ಯಕ್ಷರಾದ ಸುಧಾಕರ ಪೂಜಾರಿ, ಗ್ರಾಮದ ಗುರಿಕಾರರಾದ ರವೀಂದ್ರ ಪೂಜಾರಿ ಹಿರಿಮಾರು, ವಿಠಲ ಪೂಜಾರಿ ಹೊಸಮನೆ, ರಮಾನಂದ ಪೂಜಾರಿ ಹೊಸಮನೆ, ರಮಾನಂದ ಪೂಜಾರಿ ಮಾಲೂರು ಹಾಗೂ ಊರ ಸ್ಥಳೀಯ ಮುಖಂಡರು ಹಾಗೂ ಸಮಾಜ ಬಾಂಧವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here