‘ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಗಳ ರಾಜ್ಯ ಮಟ್ಟದ ಮಾಸ್ಟರ್ ಮತ್ತು ಕ್ಯಾಪ್ಟನ್ ಕಾರ್ಯಗಾರ

0

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಧರ್ಮಸ್ಥಳ, ಜನಜಾಗೃತಿ ಪ್ರಾದೇಶಿಕ ವಿಭಾಗ ಬೆಳ್ತಂಗಡಿ, ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮತ್ತು ಡಾ.ಹೇಮಾವತಿ ವಿ ಹೆಗ್ಗಡೆ ಯವರ ಆಶೀರ್ವಾದಗಳೊಂದಿಗೆ ’ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಗಳ ರಾಜ್ಯ ಮಟ್ಟದ ಮಾಸ್ಟರ್ ಮತ್ತು ಕ್ಯಾಪ್ಟನ್ ಕಾರ್ಯಗಾರವನ್ನು ಬೆಳ್ತಂಗಡಿ ತಾಲೂಕಿನ ಉಜಿರೆ ಜಾಗೃತಿ ಸೌಧದಲ್ಲಿ ನಡೆಸಲಾಯಿತು.

ಕಾರ್ಯಗಾರವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಟೀಮ್ ಕಮಾಂಡರ್ ಶ್ರೀಶಾಂತಿಲಾಲ್ ಜಟಿಯಾ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ರವರು ಶೌರ್ಯ ಕಾರ್ಯಕ್ರಮದ ಕುರಿತು ಅಶಯ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಇರುವ ಗಣ್ಯರು ಮಾಸ್ಟರ್, ಕ್ಯಾಪ್ಟನ್ ಗಳಿಗೆ ಶೌರ್ಯ ಸಮವಸ್ತ್ರ ಹಾಗೂ ಕ್ಯಾಪ್ ಗಳನ್ನು ವಿತರಣೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎಸ್.ಡಿ.ಎಮ್ ಮೆಡಿಕಲ್ ಟ್ರಸ್ಟ್ ಧರ್ಮಸ್ಥಳ ಇದರ ಕಾರ್ಯದರ್ಶಿ ಶಿಶುಪಾಲ್ ಪೂವಣಿರವರು ದೇಶ ಕಾಯುವ ಯೋಧರು ಸೈನಿಕರಾದರೆ ನಾಡ ಕಾಯುವ ಯೋಧರು ನಮ್ಮ ಶೌರ್ಯ ಸ್ವಯಂ ಸೇವಕರು ಎಂದು ಪ್ರಶಂಸಿದರು.

ವೇದಿಕೆಯಲ್ಲಿ ಉಷಾ ಫೈರ್ ಸೇಫ್ಟಿ ಕಂಪನಿಯ ತರಬೇತುದಾರ ಸಂತೋಷ್ ಪೀಟರ್ ಡಿ’ಸೋಜಾ, ಬೆಳ್ತಂಗಡಿ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಸುರೇಂದ್ರ ರವರು ಉಪಸ್ಥಿತರಿದ್ದರು.ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ್ ಪಟಗಾರ ಸ್ವಾಗತಿಸಿದರು, ಕಿಶೋರ್ ಕುಮಾರ್ ವಂದಿಸಿದರು, ಮೇಲ್ವಿಚಾರಕ ನಿತೇಶ್ ಕೆ ರಾಜ್ಯದ 91 ತಾಲೂಕಿನ ಮಾಸ್ಟರ್ ಮತ್ತು ಕ್ಯಾಪ್ಟನ್ ಗಳು ಉಪಸ್ಥಿತರಿದ್ದರು. ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ನಿರೂಪಿಸಿದರು.

LEAVE A REPLY

Please enter your comment!
Please enter your name here