ನಿಡ್ಲೆ: ಬೂಡುಜಾಲು ಹಾ.ಉ. ಸಹಕಾರಿ ಸಂಘದ ವಾರ್ಷಿಕ ಮಹಾಸಭೆ- ಸದಸ್ಯರಿಗೆ ಶೇ.10 ಡಿವಿಡೆಂಡ್ ಘೋಷಣೆ

0

ನಿಡ್ಲೆ: ಬೂಡುಜಾಲು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸೆ.16ರಂದು ಸಂಘದ ಆವರಣದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಮಿಥುನ್ ಕೆ.ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಅಧ್ಯಕ್ಷ ಸತ್ಯನಾರಾಯಣ ರಾವ್, ಅಂತರಿಕ ಲೆಕ್ಕ ಪರಿಶೋಧಕ ಗೋವಿಂದ ಭಟ್, ಉಪಾಧ್ಯಕ್ಷ ಕೊರಗಪ್ಪ ಗೌಡ, ನಿರ್ದೇಶಕರಾದ ಸುಧೀಂದ್ರ ರಾವ್, ನಾರಾಯಣ ಎನ್, ಸೇಸಪ್ಪ ಗೌಡ, ಮೋನಪ್ಪ ಗೌಡ, ಬಾಬು ಎಮ್.ಕೆ, ಗಿರೀಶ್ ಗೌಡ, ರಮಣಿ ಬಿ, ವಿದ್ಯಾಲತಾ ಉಪಸ್ಥಿತರಿದ್ದರು.

ದ.ಕ ಹಾಲು ಒಕ್ಕೂಟ ಶಿಬಿರ ಕಛೇರಿ ಬೆಳ್ತಂಗಡಿಯ ವಿಸ್ತರಣಾಧಿಕಾರಿ ರಾಜೇಶ್ ಪಿ.ಕೆ ಹೈನುಗಾರಿಕೆ ವಿಷಯದಲ್ಲಿ ಸಮಗ್ರ ಮಾಹಿತಿ ನೀಡಿದರು.ಕಾರ್ಯದರ್ಶಿ ವೆಂಕಟೇಶ್ ಗೌಡ ವರದಿ ವಾಚಿಸಿದರು.ಸದಸ್ಯರಿಗೆ ಶೇ.10 ಡಿವಿಡೆಂಡ್ ಘೋಷಿಸಲಾಯಿತು.

2023-24ರಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ ಅಧ್ಯಕ್ಷ ಮಿಥುನ್ ಕೆ. ಹಾಗೂ ವನಿತಾ ಎ., ರನ್ನು ಗೌರವಿಸಲಾಯಿತು.ಉಪಾಧ್ಯಕ್ಷ ಕೊರಗಪ್ಪ ಗೌಡ ಸ್ವಾಗತಿಸಿ, ನಿರೂಪಿಸಿದರು. ನಿರ್ದೇಶಕ ಸುಧೀಂದ್ರ ರಾವ್ ವಂದಿಸಿದರು. ಸಹಾಯಕಿ ಯಶೋಧ ಸಹಕರಿಸಿದರು.

LEAVE A REPLY

Please enter your comment!
Please enter your name here