ಉಜಿರೆ: ಪಾದಾಚಾರಿಗೆ ಅಪರಿಚಿತ ವಾಹನ ಡಿಕ್ಕಿ- ಮಾನವೀಯತೆ ಮೆರೆದ ಆಂಬುಲೆನ್ಸ್ ಚಾಲಕ

0

ಉಜಿರೆ: ಬೆಳ್ತಂಗಡಿಯಿಂದ ಉಜಿರೆ ಕಡೆಗೆ ರಾತ್ರಿ 10.40ರ ವೇಳೆ ಸಂಚರಿಸುತ್ತಿದ್ದ ಧನ್ವಿ ಆಂಬುಲೆನ್ಸ್ ಚಾಲಕ ಉಜಿರೆ ತಲುಪುತ್ತಿರುವ ವೇಳೆ ಉಜಿರೆ ಜನಾರ್ಧನ ಶಾಲೆ ಹತ್ತಿರ ಅಪರಿಚಿತ ಪಾದಚಾರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪಾದಾಚಾರಿಯ ಸ್ಥಿತಿ ಗಂಭಿರವಾಗಿತ್ತು.

ತಕ್ಷಣ ತನ್ನ ಆಂಬುಲೆನ್ಸ್ ನಲ್ಲೇ ಪಾದಾಚಾರಿಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆ ಮಾಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಸರಕಾರಿ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಲಾಗಿದ್ದು, ಪಾದಾಚಾರಿಯ ಗುರುತು ಪತ್ತೆ ಇನ್ನೂ ತಿಳಿದು ಬಂದಿಲ್ಲ, ಇವರನ್ನು ಪರಿಶೀಲಿಸಿದಾಗ 110ರೂ ಹಣ ಮತ್ತು ಮಂಗಳೂರು-ಉಜಿರೆಗೆ ಪ್ರಯಾಣಿಸುತ್ತಿದ್ದ ಬಸ್ ಟಿಕೆಟ್ ಇತ್ತು ಎಂದು ತಿಳಿದುಬಂದಿದೆ.

ಈ ಪ್ರಕರಣದಲ್ಲಿ ಆಂಬುಲೆನ್ಸ್ ಚಾಲಕ ಮಾನವೀಯತೆ ಮೆರೆದಿದ್ದಾರೆ.

LEAVE A REPLY

Please enter your comment!
Please enter your name here