ಕುವೆಟ್ಟು: ಸ.ಉ.ಹಿ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ- ವರ್ಗಾವಣೆಗೊಂಡ ಶಿಕ್ಷಕರಿಗೆ ಗೌರವ

0

ಕುವೆಟ್ಟು: ಸ.ಉ.ಹಿ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಸಿರಾಜ್.ಎಂ .ಚಿಲಿಂಬಿ ನೆರವೇರಿಸಿದರು.ತದನಂತರ ಜರಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿರಾಜ್. ಎಂ. ಚಿಲಿಂಬಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ.ಎಸ್ ಶೆಟ್ಟಿ, ಉಪಾಧ್ಯಕ್ಷ ಗಣೇಶ್, ಗ್ರಾ.ಪಂ ಸದಸ್ಯರಾದ ರಿಯಾಜ್, ಶಾಲಿನಿ, ಅಮೀನಾ, ನಿವೃತ್ತ ಬ್ಯಾಂಕ್ ಮ್ಯಾನೇಜರ್ ಹಿರಿಯರಾದ ಗೋವಿಂದ ಭಟ್, ಮಡಂತ್ಯಾರು ರೋಟರಿ ಕ್ಲಬ್ ಇದರ ಅಧ್ಯಕ್ಷ ನಿತ್ಯಾನಂದ ಕೆ, ಪ್ರದೀಪ್ ನಾಯಕ್ ಮದ್ದಡ್ಕ, ಎಸ್ ಕೆ ಡಿ‌ ಆರ್ ಡಿ ಪಿ ಸೇವಾ ಪ್ರತಿನಿಧಿ ಜಾನಕಿ ಎಸ್, ಶಾಲಾ ಮುಖ್ಯೋಪಾಧ್ಯಾಯ ಭಾಸ್ಕರ, ಶಾಲಾ ನಾಯಕಿ ಶಿವಾನಿ ಮತ್ತಿತರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಶಾಲೆಗೆ ನೂತನವಾಗಿ ಸೇರಿದ ವಿದ್ಯಾರ್ಥಿಗಳಿಗೆ ಶಾಲಾ ಐ.ಡಿ, ಟೈ, ಬೆಲ್ಟ್ ವಿತರಿಸಲಾಯಿತು.ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.ನಮ್ಮ ಶಾಲೆಯಿಂದ ನಡ ಹೈಸ್ಕೂಲ್ಗೆ ವರ್ಗಾವಣೆಗೊಂಡ ಟಿಜಿಟಿ ಶಿಕ್ಷಕ ಸುರೇಶ್ ಶೆಟ್ಟಿ ಹಾಗೂ ದಾನಿಗಳಾದ ನಿತ್ಯಾನಂದ.ಕೆ, ಪ್ರದೀಪ್ ನಾಯಕ್, ಉಪೇಂದ್ರ ಆಚಾರ್ಯ ಇವರಿಗೆ ಗೌರವಾರ್ಪಣೆ ಮಾಡಲಾಯಿತು.

ಜಿಪಿಟಿ ಶಿಕ್ಷಕಿ ಶಶಿಕಲಾ ನಿರೂಪಿಸಿ, ಜಿಪಿಟಿ ಶಿಕ್ಷಕ ಕಿರಣ್ ಎಸ್ ಪಿ. ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here