78ನೇ ಸ್ವಾತಂತ್ರ್ಯದಿನದ ಅಂಗವಾಗಿ ಬದ್ರಿಯಾ ನಗರ ಬೋಳದ ಬೈಲ್ ಎಸ್.ಕೆ.ಎಸ್.ಎಸ್.ಎಫ್ ಮತ್ತು ಎಸ್.ಕೆ.ಎಸ್.ಬಿ.ವೈ ವತಿಯಿಂದ ದ್ವಜಾರೋಹಣ ಕಾರ್ಯಕ್ರಮ

0

ಕೊಕ್ಕಡ: 78ನೇ ಸ್ವಾತಂತ್ರ್ಯದಿನದ ಅಂಗವಾಗಿ ಬದ್ರಿಯಾ ನಗರ ಬೋಳದ ಬೈಲ್ ಎಸ್.ಕೆ.ಎಸ್.ಎಸ್.ಎಫ್ ಮತ್ತು ಎಸ್.ಕೆ.ಎಸ್.ಬಿ.ವೈ ವತಿಯಿಂದ ದ್ವಜಾರೋಹಣ ಕಾರ್ಯಕ್ರಮ ನಡೆಯಿತು.ಧ್ವಜಾರೋಹಣವನ್ನು ಊರಿನ ಹಿರಿಯರಾದ ಆದಂ ಬಿ.ಕೆ ಹಾಗೂ ಮಸೀದಿ ಅಧ್ಯಕ್ಷರಾದ ಅಶ್ರಫ್ ಬಿ.ಕೆ ನಿರ್ವಹಿಸಿದರು. ಮಸೀದಿ ಧರ್ಮ ಗುರುಗಳಾದ ಮುಸ್ತಫ ಫೈಝಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯ ಅತಿಥಿಗಳನ್ನು, ಊರ ಪರ ಊರ ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪ್ರಕಾಶ್ ರೈ ಪಟ್ಲಡ್ಕ ಹಾಗೂ ಹೇಮಂತ್ ಕುಮಾರ್ ಕೊಕ್ಕಡ, ಮ್ಯಾಕ್ಸಿ ಲೋಬೋರವರನ್ನು ಶಾಲು ಹೊದಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಗಣೇಶ್ ಪ್ರಸಾದ್ ಅಂಬಿಕ ಕ್ಲಿನಿಕ್ ಸ್ವಾತಂತ್ರ್ಯ ಉತ್ಸವದ ಸಂದೇಶ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕೊಲಾಜ್, ದ್ವಜ ನಿರ್ಮಾಣ,ದೇಶ ಭಕ್ತಿ ಗೀತೆ, ಸ್ಪರ್ಧೆಯಲ್ಲಿ ಭಾಗವಹಿಸಿ ಕೊಲಾಜ್ ಪ್ರಥಮ ಸ್ಥಾನ ಗಳಿಸಿದ ಮೊಹಮ್ಮದ್ ಬಾಯಿಷ್ ದ್ವಿತೀಯ ಸ್ಥಾನ ಪಡೆದ ಇರ್ಫಾನ್ ದೇಶಭಕ್ತಿ ಗೀತೆಯಲ್ಲಿ ಪ್ರಥಮ ಇಹ್ಸಾನ್ ದ್ವಿತೀಯ ಸ್ಥಾನ ಪಡೆದ ರಿಫ ಧ್ವಜನಿರ್ಮಾಣ ಸ್ಪರ್ಧೆಯಲ್ಲಿ ಪ್ರಥಮ ಸಾದಾತ್ ಹಾಗೂ ದ್ವಿತೀಯ ಸಫ್ವಾನ್ ವಿದ್ಯಾರ್ಥಿಗಳನ್ನು ಬಹುಮಾನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬೋಳದ ಬೈಲ್ ರಿಫಾಯಿಯ್ಯ ಜುಮಾ ಮಸೀದಿಯ ಅದ್ಯಕ್ಷರಾದ ಅಶ್ರಫ್ ಬಿ.ಕೆ, ಎಸ್.ಕೆ.ಎಸ್.ಎಸ್.ಎಫ್ ಅದ್ಯಕ್ಷ ಹಾರಿಶ್ ಬಿ.ಕೆ, ಮುಖ್ಯ ಕಾರ್ಯದರ್ಶಿ ಅಬೂಬಕ್ಕರ್ ಹಾಗೂ ಊರಿನ ಗಣ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here