ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿ ಸ್ವಾತಿ ವರ್ಗಾವಣೆ- ನೂತನ ಆರ್ ಎಫ್ ಓ ಆಗಿ ವಿ.ಶರ್ಮಿಷ್ಠ ಕರ್ತವ್ಯಕ್ಕೆ ಹಾಜರು

0

ಬೆಳ್ತಂಗಡಿ: ಬೆಳ್ತಂಗಡಿ ವನ್ಯಜೀವಿ ಅರಣ್ಯ ವಿಭಾಗದ ಅರಣ್ಯಾಧಿಕಾರಿ ಸ್ವಾತಿ ರವರು ಕೊಪ್ಪಳ ಜಿಲ್ಲೆಯ ಮುನಿರಾಬಾದ್ ವಲಯ ಅರಣ್ಯ ಇಲಾಖೆಗೆ ವರ್ಗಾವಣೆಯಾಗಿದ್ದಾರೆ. ಅವರು ಬೆಳ್ತಂಗಡಿ ವನ್ಯಜೀವಿ ವಿಭಾಗಕ್ಕೆ 2022ರಲ್ಲಿ ಮೊದಲ ಮಹಿಳಾ ಅರಣ್ಯಾಧಿಕಾರಿ ಆಗಿ ಕರ್ತವ್ಯಕ್ಕೆ ಹಾಜರಾದರು.

2016ರಲ್ಲಿ ಅರಣ್ಯ ಇಲಾಖೆಗೆ ಸೇರ್ಪಡೆಯಾಗಿದ್ದ ಸ್ವಾತಿರವರಿಗೆ ಗುಜರಾತ್‌ನಲ್ಲಿ ನಡೆದ ತರಬೇತಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ನೆಲಮಂಗಳ ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಚಿಕ್ಕಮಗಳೂರಿನಲ್ಲಿ ವಲಯ ಅರಣ್ಯಧಿಕಾರಿಯಾಗಿದ್ದರು. ಮೂಲತಃ ಬೆಂಗಳೂರಿನವರಾಗಿದ್ದು, ಕೊಡಗು ಜಿಲ್ಲೆಯ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪೂರೈಸಿದರು.

ನೂತನ ಆರ್ ಎಫ್ ಓ ಆಗಿ ಚಿಕ್ಕಮಂಗಳೂರು ಜಿಲ್ಲೆಯ ಕಾರ್ಯ ಯೋಜನೆವಲಯ ಅರಣ್ಯ ಅಧಿಕಾರಿ ವಿ.ಶರ್ಮಿಷ್ಠ ಆ.6ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

LEAVE A REPLY

Please enter your comment!
Please enter your name here