ಮರೋಡಿ: ಸಿಕ್ಕ ಹಣ ಮತ್ತು ಮೊಬೈಲ್ ನ್ನು ವಾರಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಅಬ್ದುಲ್ ಅಜೀಜ್

0

ಮರೋಡಿ: ಮರೋಡಿ ಗ್ರಾಮದ ಹಾಲಿನ ಡೈರಿಗೆ ತೆರಳುತ್ತಿದ್ದ ಅಬ್ದುಲ್ ಅಜೀಜ್ ಕಾಂತರ ಪಾಲ್ಕೆ ಇವರಿಗೆ ರಸ್ತೆ ಬದಿಯಲ್ಲಿ ಹಣ ಮತ್ತು ಮೊಬೈಲ್ ಇದ್ದ ಪ್ಲಾಸ್ಟಿಕ್ ಕವರ್ ಜುಲೈ 26ರಂದು ಬೆಳಗ್ಗೆ ಸಿಕ್ಕಿರುತ್ತದೆ.

ತಕ್ಷಣ ಸಿಕ್ಕಿರುವ ಮೊಬೈಲಿಗೆ ಕರೆ ಬಂದಾಗ ಸ್ಪಂದಿಸಿ ಸಿಕ್ಕಿರುವ ವಿಚಾರವನ್ನು ತಿಳಿಸಿ ಶಿರ್ತಾಡಿ ಹತ್ತಿರದ ಜಯಶ್ರೀ ಹೋಟೆಲ್‌ ಬರಲು ಹೇಳಿ ವಾರಸುದಾರ ಶ್ರೀಧರ್ ಪೂಜಾರಿ ಅರಸು ಕಟ್ಟೆ ಎಂದು ತಿಳಿದು ಎಲ್ಲರ ಸಮ್ಮುಖದಲ್ಲಿ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದರು.

LEAVE A REPLY

Please enter your comment!
Please enter your name here