ಇಳಂತಿಲ: ಗ್ರಾಮ ಸಮಿತಿ ಸಭೆ

0

ಇಳಂತಿಲ: ಇಳಂತಿಲ ಗ್ರಾಮ ಸಮಿತಿ ಸಭೆ ಅಂಡೆತಡ್ಕ ಶಾಲೆಯಲ್ಲಿ ನಡೆಯಿತು.

ಸಭೆಯಲ್ಲಿ ಕಣಿಯೂರು ವಲಯ ಗ್ರಾಮ ಸಮಿತಿಯ ಅಧ್ಯಕ್ಷ ಪ್ರಪುಲಚಂದ್ರ ಅಖಿಲ ಕರ್ನಾಟಕ ಜನಜಾಗೃತಿ ಸಮಿತಿಯ ಸದಸ್ಯ ಅಬ್ಬಾಸ್ ಬಟ್ಲಡ್ಕ, ವಲಯ ಮೇಲ್ವಿಚಾರಕ ಶಿವಾನಂದ, ವಾಣಿಶ್ರೀ ಭಜನಾ ಮಂಡಳಿಯ ಅಧ್ಯಕ್ಷ ಹರೀಶ್, ನವಜೀವನ ಸಮಿತಿಯ ಅಧ್ಯಕ್ಷ ಪದ್ಮನಾಭ, ಸೇವಾಪ್ರತಿನಿಧಿ ವಸಂತಿ ಹಾಗು ನವಜೀವನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಅಬ್ಬಾಸ್ ಬಟ್ಲಲಡ್ಕರವರು ಸಮಿತಿಯ ಪುನಃ ರಚನೆಯ ಬಗ್ಗೆ ಮಾಹಿತಿ ನೀಡಿದರು.ಮುಂದಿನ ದಿನಗಳಿಂದ ಭಜನೆ ಮಾಡಬೇಕಾಗಿ ತಿಳಿಸಿದರು.ಪ್ರಪುಲ್ಲಚಂದ್ರರವರು ಪ್ರತಿ ತಿಂಗಳು ಗ್ರಾಮ ಸಮಿತಿ ಸಭೆ ನಡೆಸಬೇಕಾಗಿ ಮಾಹಿತಿ ನೀಡಿದರು.

ರಮೇಶ್ ಸ್ವಾಗತಿಸಿ, ವಿಶ್ವನಾಥ ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here