ಧರ್ಮಸ್ಥಳದಲ್ಲಿ ‘ಆತಿಥ್ಯ ವೆಜ್’ ಉದ್ಘಾಟನೆ

0

ಧರ್ಮಸ್ಥಳ: ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನವಾಗಿ ಉದ್ಘಾಟನೆಗೊಂಡ ಉನ್ನತಿ ವಾಣಿಜ್ಯ ಸಂಕೀರ್ಣದಲ್ಲಿ ‘ಆತಿಥ್ಯ ವೆಜ್’ ಇದರ ಉದ್ಘಾಟನಾ ಸಮಾರಂಭ ಜು.16ರಂದು ನಡೆಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಮಣೆಗಾರರು ವಸಂತ ಮಂಜಿತ್ತಾಯ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಧರ್ಮಸ್ಥಳ ಪರಿಸರಕ್ಕೆ ‘ಆದಿತ್ಯ ವೆಜ್’ ಶೋಭೆಯನ್ನು ತಂದಿದೆ. ಗ್ರಾಹಕರಿಗೆ ಶುಚಿ ರುಚಿಯಾದಂತಹ ಆತಿಥ್ಯವನ್ನು ನೀಡಿ. ಉದ್ಯಮ ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸಿದರು.

ಧರ್ಮಸ್ಥಳ ಪ್ರಾ.ಕೃಪ.ಸ. ಅಧ್ಯಕ್ಷ ಪ್ರೀತಮ್‌ ಡಿ. ಮಾತನಾಡಿ ನೂತನವಾಗಿ ಉದ್ಘಾಟನೆಗೊಂಡ ಉನ್ನತಿ ಕಟ್ಟಡಕ್ಕೆ ‘ಆತಿಥ್ಯ ವೆಜ್ ಇನ್ನಷ್ಟು ಮೆರಗು ತಂದಿದೆ. ಕ್ಷೇತ್ರಕ್ಕೆ ಬರುವಂತಹ ಭಕ್ತರು, ಪ್ರವಾಸಿಗರು ಹಾಗೂ ಸ್ಥಳೀಯರು ಆತಿಥ್ಯ ವೆಜ್ ಗೆ ಬರುವಂತಾಗಲಿ.ಹೋಟೆಲ್ ಉದ್ಯಮ ಉತ್ತಮ ಅಭಿವೃದ್ಧಿಯಾಗಲಿ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಧರ್ಮಸ್ಥಳ ಪ್ರಾ.ಕೃಪ.ಸ. ಉಪಾಧ್ಯಕ್ಷ ಅಜಿತ್‌ ಕುಮಾ‌ರ್ ಜೈನ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವ್ಯವಸ್ಥಾಪಕ ಎನ್ . ಸತೀಶ್ ಹೊಳ್ಳ, ವ್ಯಾಪಾರಸ್ಥ ಅಖಿಲೇಶ್‌ ಕುಮಾರ್ ಎಂ,ಆನಂದ ಭವನದ ರವಿ ಕುಮಾ‌ರ್, ವ್ಯಾಪಾರಸ್ಥರಾದ ಹರ್ಷಿತ್ ಕುಮಾರ್ ಜೈನ್, ಮುರಳೀದರ ದಾಸ್‌, ಧರ್ಮಸ್ಥಳ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ದೇವಸ್ಯ ಟಿ.ವಿ.ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಕೋರಿದರು.

ಪಾಲುದಾರರಾದ ನಿಶಾಂತ್ ಹೆಬ್ಬಾ‌ರ್ ಮತ್ತು ವಿನಾಯಕ್ ಹಾಗೂ ಬಂಧು- ಮಿತ್ರರು ಉಪಸ್ಥಿತರಿದ್ದರು.ರೇಖಾ ಪ್ರಶಾಂತ್ ಹೆಬ್ಬಾರ್ ಪ್ರಾರ್ಥಿಸಿದರು. ಮೋಹನ್ ಕೆ. ಧರ್ಮಸ್ಥಳ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here