ಕೊಕ್ಕಡ ಅಮೃತ ಗ್ರಾಮ ಪಂಚಾಯತ್ ನಿಂದ ಅರ್ಹ ಫಲಾನುಭವಿಗಳಿಗೆ ನೀರಿನ ಡ್ರಮ್ ಗಳ ವಿತರಣಾ ಕಾರ್ಯಕ್ರಮ -ಶಾಸಕರಿಂದ ವಿತರಣೆ

0

ಕೊಕ್ಕಡ: ಅಮೃತ ಗ್ರಾಮ ಪಂಚಾಯತ್ ನಿಂದ ಸ್ವಂತ ನಿಧಿಯ 25% ಅನುದಾನಡದಿ 105 ಜನ ಪ. ಜಾತಿ /ಪ. ಪಂಗಡದವರಿಗೆ ನೀರಿನ ಡ್ರಮ್ ವಿತರಣಾ ಕಾರ್ಯಕ್ರಮ ಕೊಕ್ಕಡದ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜಾ ನೆರವೇರಿಸಿ ಪಲಾನುಭವಿಗಳಿಗೆ ಡ್ರಮ್ ವಿತರಿಸಿದರು.

ವೇದಿಕೆಯಲ್ಲಿ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಕುಶಾಲಪ್ಪ ಗೌಡ ಪೂವಾಜೆ, ಪಂಚಾಯತ್ ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷ ಪ್ರಭಾಕರ್ ಗೌಡ, ನಿಕಟ ಪೂರ್ವ ಅಧ್ಯಕ್ಷರಾದ ಯೋಗೀಶ್ ಆಳಂಬಿಲ, ಎಸ್ ಟಿ ಮೋರ್ಚಾದ ತಾಲೂಕ ಪ್ರಧಾನ ಕಾರ್ಯದರ್ಶಿ ವಿಠಲ್ ಕುರ್ಲೆ, ಗಿರೀಶ್ ಮಹಾವೀರ ಕಾಲೋನಿ ಪಿ ಡಿ ಓ ದೀಪಕ್ ರಾಜ್ ಪಂಚಾಯತ್ ಸದಸ್ಯರು, ಉಪಸ್ಥಿತರಿದ್ದರು.

ಕಾರ್ಯಕ್ರಮದ ಸ್ವಾಗತ ವನ್ನು ಯೋಗೀಶ್ ಆಲಂಬಿಲ, ನಿರೂಪಣೆಯನ್ನು ಕೇಶವ ಕೊಕ್ಕಡ, ಧನ್ಯವಾದವನ್ನು ಪಿ ಡಿ ಓ ದೀಪಕ್ ರಾಜ್ ನೆರವೇರಿಸಿದರು.

LEAVE A REPLY

Please enter your comment!
Please enter your name here