ಗೇರುಕಟ್ಟೆ: ಅಂಚೆ ಪತ್ರ ವಿತರಕ ಡಾಕಯ್ಯ ಗೌಡ ಹೀರ್ಯ ಸೇವೆಯಿಂದ ನಿವೃತ್ತಿ

0

ಬೆಳ್ತಂಗಡಿ: ಗೇರುಕಟ್ಟೆ ಉಪ ಅಂಚೆ ವಿಭಾಗದಲ್ಲಿ ಸತತವಾಗಿ 38 ವರ್ಷಗಳ ಕಾಲ ಕೇಂದ್ರ ಸರಕಾರದ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಜು.6ರಂದು ಸೇವೆಯಿಂದ ನಿವೃತ್ತಿ ಹೊಂದಿದರು.

ನಿವೃತ್ತರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊರಂಜ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಮತ್ತು ಡಿಗ್ರಿ ಶಿಕ್ಷಣವನ್ನು ಶ್ರೀ ಧರ್ಮಸ್ಥಳ ಮಂಜುನಾಥಶ್ವರ ಶಿಕ್ಷಣ ಸಂಸ್ಥೆ ಉಜಿರೆಯಲ್ಲಿ ಪೂರೈಸಿದರು.
ಕಳಿಯ, ನ್ಯಾಯತರ್ಪು ವ್ಯಾಪ್ತಿಯಲ್ಲಿರುವ ಯುವ ಕಲಾವಿದರಿಗೆ ಸಾಮಾಜಿಕ ನಾಟಕ ತರಬೇತಿ ನೀಡುವ ಮೂಲಕ ಹವ್ಯಾಸಿ ಕಲಾವಿದರಾಗಿದ್ದಾರೆ.
ತನ್ನ ವೃತ್ತಿಯಲ್ಲಿ ಯಾವುದೇ ಲಂಚ ಆಸೆ ಆಮಿಷಗಳಿಗೆ ಕೈ ಒಡ್ಡದೇ ತನ್ನ ಕರ್ತವ್ಯದಲ್ಲಿ ಪ್ರಾಮಾಣಿಕತೆಯಿಂದ ದುಡಿದು ಮುಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.

LEAVE A REPLY

Please enter your comment!
Please enter your name here