ತಾಲೂಕು ಔಷಧಿ ವ್ಯಾಪಾರಸ್ಥರ‌ ಸಂಘದಿಂದ ವೈಶಿಷ್ಟ್ಯ ಪೂರ್ಣವಾಗಿ ವೈದ್ಯರ ದಿನಾಚರಣೆ

0

ಬೆಳ್ತಂಗಡಿ: ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದ ವತಿಯಿಂದ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲಾಯಿತು.

ತಾಲೂಕಿನ ವೈದ್ಯರುಗಳನ್ನು ಅವರವರ ಆಸ್ಪತ್ರೆಗಳಿಗೆ ಭೇಟೆ ಮಾಡಿ ಅವರಿಗೆ ಪುಷ್ಪಗುಚ್ಛ ವನ್ನು ನೀಡುವ ಮೂಲಕ ಅವರನ್ನು ಅಭಿನಂದಿಸಿದರು.ತಾಲೂಕಿನ ಬೇರೆ ಬೇರೆ ಗ್ರಾಮಗಳಲ್ಲಿ ಇರುವ ವೈದ್ಯರುಗಳನ್ನು ಸ್ಥಳೀಯ ಔಷಧಿ ವ್ಯಾಪಾರಿಗಳು ಪುಷ್ಪ ಗುಚ್ಛ ನೀಡಿ ಅಭಿನಂದಿಸುವ ಮೂಲಕ ವೈದ್ಯರ ದಿನಾಚರಣೆಯನ್ನು ಆಚರಿಸಿದರು.

ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಶ್ರೀಧರ ಕೆ, ಕಾರ್ಯದರ್ಶಿ ಮಾಧವ ಗೌಡ, ಕೋಶಾಧಿಕಾರಿ ಗಣಪತಿ ಭಟ್, ಪೂರ್ವಾಧ್ಯಕ್ಷರುಗಳು ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ತಾಲೂಕಿನ ಬೇರೆ ಬೇರೆ ವಲಯಗಳ ಔಷಧಿ ವ್ಯಾಪಾರಿಗಳು ಬಹಳ ಉತ್ಸಾಹದಿಂದ ಭಾಗವಹಿಸಿದರು.85ಕ್ಕೂ ಮಿಕ್ಕಿ ವೈದ್ಯರುಗಳನ್ನು ಒಂದೇ ದಿನ ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here