ಶಿಬರಾಜೆ: ಕುಟ್ರುಪಾಡಿ ನಿವಾಸಿ ರಾಮಣ್ಣ (ದಿನೇಶ್ )ನಾಯ್ಕರ ಮನೆ ಚಾವಣಿ ಸಂಪೂರ್ಣ ಕುಸಿತ

0

ಶಿಬರಾಜೆ: ಜು.29ರಂದು ಸುರಿದ ಭಾರಿ ಗಾಳಿ ಮಳೆಗೆ ಕುಟ್ರುಪಾಡಿ ನಿವಾಸಿ ರಾಮಣ್ಣ (ದಿನೇಶ್ )ನಾಯ್ಕರ ಮನೆ ಚಾವಣಿ ಸಂಪೂರ್ಣ ಕುಸಿತಗೊಂಡಿದ್ದು, ತಕ್ಷಣ ಧಾವಿಸಿದ ಬಿಜೆಪಿ ಬೂತ್ ಸಮಿತಿ 174 ರ ಅಧ್ಯಕ್ಷರಾದ ಹರೀಶ್ ವಳಗುಡ್ಡೆ ಕಾರ್ಯಕರ್ತರ ಮತ್ತು ಸದಸ್ಯರ ಸಹಾಯದಿಂದ ಮುರಿದು ಬಿದ್ದ ಮನೆಯ ಸಾಮಾನುಗಳನ್ನು ವಿಲೇವಾರಿವಾರಿ ಮಾಡಿ ಅವರ ಕಷ್ಟಕ್ಕೆ ಸ್ಪಂಧಿಸಿ ಸಹಾಯ ಮಾಡಿರುತ್ತಾರೆ.

ರಾಮಣ್ಣ (ದಿನೇಶ್ )ನಾಯ್ಕರ ಮನೆಯವರು ಆತಂಕ ಗೊಂಡಿದ್ದು ಉಳಿದುಕೊಳ್ಳಲು ಸಂಬಂಧಿಕರಾದ ದಯಾನಂದ ನಾಯ್ಕರ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here