ತಾಯಿಯ ವೈಕುಂಠ ಸಮಾರಾಧನೆಯಂದು 500ಕ್ಕೂ ಅಧಿಕ ಶ್ರೀಗಂಧದ ಗಿಡ ವಿತರಣೆ- ರಾಜ್ ಪ್ರಕಾಶ್ ಮದ್ದಡ್ಕ ಕುಟುಂಬಸ್ಥರಿಂದ ಮಾದರಿ ಕಾರ್ಯ

0

ಮದ್ದಡ್ಕ: ಇತ್ತೀಚೆಗೆ ದೈವಾದೀನರಾದ ಗುತ್ತಿಗೆದಾರ ರಾಜ್ ಪ್ರಕಾಶ್ ಮದ್ದಡ್ಕರವರ ತಾಯಿ ಸರಸ್ವತಿಯವರ ವೈಕುಂಠ ಸಮಾರಾಧನೆಯನ್ನು ಅವರ ಮನೆಯಲ್ಲಿ ಅರ್ಥಪೂರ್ಣವಾಗಿ ನೆರವೇರಿಸಲಾಯಿತು.

ಕಾರ್ಯಕ್ರಮಕ್ಕೆ ಬಂದ 500ಕ್ಕೂ ಅಧಿಕ ಕುಟುಂಬಸ್ಥರು, ಸ್ನೇಹಿತರಿಗೆ ರಾಜ್ ಪ್ರಕಾಶ್ ಕುಟುಂಬಸ್ಥರು ಶ್ರಿಗಂಧದ ಮರ ವಿತರಿಸಿದರು.

ಈ ಮೂಲಕ ತಾಯಿಯ ನೆನಪಿಗಾಗಿ 500ಕ್ಕೂ ಅಧಿಕ ಗಿಡಗಳನ್ನು ನೀಡಿರುವ ಯೋಚನೆ ಶ್ಲಾಘನೆಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here