ಮಡಂತ್ಯಾರು: ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಗಿಡ ನಾಟಿ ಕಾರ್ಯಕ್ರಮ

0

ಮಡಂತ್ಯಾರು: ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕವು 4 ವರ್ಷಗಳನ್ನು ಪೂರೈಸಿ 5ನೇ ವರ್ಷಕ್ಕೆ ಪಾದಾರ್ಪಣೆ ಗೈಯುವ ಸವಿನೆನಪಿಗಾಗಿ ಮಡಂತ್ಯಾರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಪಾರೆಂಕಿ ಶ್ರೀ ಮಹಿಷಾಮರ್ದಿನಿ ದೇವಸ್ಥಾನದ ಆವರಣದಲ್ಲಿ ಗಿಡ ನಾಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ್ ರಾವ್ ಪೇಜಾವರ ಮತ್ತು ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪಾ ರವರು ಗಿಡ ನಾಟಿ ಮಾಡುವ ಮೂಲಕ ಶುಭಹಾರೈಸಿದರು.ಮಡಂತ್ಯಾರು ವಲಯ ಮೇಲ್ವಿಚಾರಕ ವಸಂತ ಕುಮಾರ್ ರವರು ಮಾಹಿತಿ ಮಾರ್ಗದರ್ಶನ ನೀಡಿದರು.

ಅರ್ಚಕ ಆದಿತ್ಯ, ಪಾರೆಂಕಿ ಒಕ್ಕೂಟದ ಅಧ್ಯಕ್ಷ ಪ್ರವೀಣ್ ಕುಮಾರ್, ಸೇವಾ ಪ್ರತಿನಿಧಿ ಹರಿಣಾಕ್ಷಿ ಉಪಸ್ಥಿತರಿದ್ದರು.

ಶೌರ್ಯ ಸ್ವಯಂ ಸೇವಕರಾದ ಬಾಲಕೃಷ್ಣ ಹಾರಬೆ, ದಯಾನಂದ ಹಚ್ಚಬೆ, ದೀಪಕ್ ಹಾರಬೆ, ಸುಜೀತ್ ಕುಮಾರ್, ಜಯ ಪೂಜಾರಿ ಕುತ್ತಿನ, ಪುರುಷೋತ್ತಮ, ಮಾಧವ, ಶೋಭಾ, ಶಕುಂತಳಾ, ಬೇಬಿ, ಸತೀಶ್ ಆಚಾರ್ಯ ಗಿಡ ನಾಟಿ ಕಾರ್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here